ಶನಿವಾರ, 16 ಆಗಸ್ಟ್ 2025
×
ADVERTISEMENT
ADVERTISEMENT

ಹಲಸೂರು | ಪಾದಚಾರಿ ಮಾರ್ಗದಲ್ಲಿ ಕಸದ ರಾಶಿ: ಮೂಗುಮುಚ್ಚಿ ನಡೆದಾಡುವ ದುಃಸ್ಥಿತಿ

ರಕ್ಷಿತಾ ಚಪ್ಪರಿಕೆ
Published : 15 ಆಗಸ್ಟ್ 2025, 23:30 IST
Last Updated : 15 ಆಗಸ್ಟ್ 2025, 23:30 IST
ಫಾಲೋ ಮಾಡಿ
Comments
ಹೆಚ್ಚಾದ ಸೊಳ್ಳೆ ಕಾಟ!
‘ರಾತ್ರೋರಾತ್ರಿ ಮನೆಯ ತ್ಯಾಜ್ಯವನ್ನು ಪಾದಚಾರಿಗಳ ಮಾರ್ಗದಲ್ಲಿ  ಎಸೆದು ಹೋಗುತ್ತಿದ್ದಾರೆ. ಪರಿಸರದ ಜೊತೆಗೆ ಆರೋಗ್ಯಕ್ಕೂ ಸಂಕಷ್ಟ ಎದುರಾಗಿದೆ. ಸುತ್ತಮುತ್ತಲಿನ ಪ್ರದೇಶದಲ್ಲಿ ಸೊಳ್ಳೆ ಕಾಟ ವಿಪರೀತವಾಗಿದೆ. ಸೊಳ್ಳೆಗಳೂ ಹೆಚ್ಚಾಗಿದ್ದು ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ’ ಎಂದು ಸ್ಥಳೀಯ ನಿವಾಸಿಗಳಾದ ಪ್ರದಿತ್ ಪ್ರಸನ್ನ ಆತಂಕ ವ್ಯಕ್ತಪಡಿಸಿದರು.
ಏಕಬಳಕೆ ಪ್ಲಾಸ್ಟಿಕ್ ಹೆಚ್ಚು!
ನಗರದಲ್ಲಿ ಪ್ಲಾಸ್ಟಿಕ್‌ನ ಬಳಕೆಗೆ ನಿಷೇಧವಿದ್ದರೂ ಹಲಸೂರಿನ ಕೆಲವು ಅಂಗಡಿ ಹೋಟೆಲ್‌ಗಳಲ್ಲಿ ಪಾರ್ಸಲ್‌ಗಳನ್ನು ಪ್ಲಾಸ್ಟಿಕ್‌ನಲ್ಲಿಯೇ ನೀಡಲಾಗುತ್ತಿದೆ. ಏಕ ಬಳಕೆಯ ಪ್ಲಾಸ್ಟಿಕ್ ಬಳಕೆ ಹೆಚ್ಚಿದ್ದು ಅದರ ತ್ಯಾಜ್ಯ ಪಾದಚಾರಿ ಮಾರ್ಗದಲ್ಲೆಲ್ಲ ಹರಿಡಿಕೊಂಡಿರುತ್ತದೆ. ಗಾಳಿಗೆ ತೂರಿಕೊಂಡು ರಸ್ತೆ ಹಾಗೂ ಅಂಗಡಿಗಳಿಗೆ  ಹೋಗುತ್ತಿದೆ. ‘ಪ್ಲಾಸ್ಟಿಕ್‌ ಬಳಕೆ ನಿಯಂತ್ರಿಸಲು ಬಿಬಿಎಂಪಿಯವರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿಲ್ಲ. ಬೀದಿ ಬದಿ ಮಾರಾಟಗಾರರು ಸೇರಿದಂತೆ ಅಂಗಡಿ ಹೋಟೆಲ್‌ನವರು ಪ್ಲಾಸ್ಟಿಕ್‌ ಬಳಕೆ ನಿಲ್ಲಿಸುತ್ತಿಲ್ಲ’ ಎಂದು ಸ್ಥಳೀಯ ನಿವಾಸಿ ಜಗದೀಶ್‌ ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT