<p><strong>ಬೆಂಗಳೂರು: </strong>ಎಚ್ಬಿಆರ್ ಲೇಔಟ್ ಬಳಿಯ ಉದ್ಯಾನವೊಂದರಲ್ಲಿ ನಿತ್ಯವೂ ಕೆಲ ಬಾಲಕರು ಡ್ರಗ್ಸ್ ಸೇವಿಸುತ್ತಿದ್ದು, ಆ ಸಂಬಂಧ ಸ್ಥಳೀಯ ನಿವಾಸಿ ವಿಕ್ರಮ್ ಎಂಬುವರು ನಗರ ಪೊಲೀಸರಿಗೆ ಟ್ವಿಟರ್ ಮೂಲಕ ದೂರು ನೀಡಿದ್ದಾರೆ.</p>.<p>‘ಎಚ್ಬಿಆರ್ ಲೇಔಟ್ನ 3ನೇ ಹಂತದ 2ನೇ ಮುಖ್ಯರಸ್ತೆಯಲ್ಲಿರುವ ಉದ್ಯಾನದಲ್ಲಿ ಕೆಲ ಬಾಲಕರು, ಡ್ರಗ್ಸ್ ಸೇವಿಸುವುದು ಹಾಗೂ ಧೂಮಪಾನ ಮಾಡುವುದು ಮಾಡುತ್ತಿದ್ದಾರೆ. ಉದ್ಯಾನದಲ್ಲೆಲ್ಲ ಡ್ರಗ್ಸ್ನ ಕುರುಹುಗಳು ಬಿದ್ದಿವೆ’ ಎಂದು ವಿಕ್ರಮ್ ದೂರಿನಲ್ಲಿ ತಿಳಿಸಿದ್ದಾರೆ.</p>.<p>‘ಉದ್ಯಾನ ಹಾಗೂ ಅದರ ಸುತ್ತಮುತ್ತ ಹೆಚ್ಚಾಗಿ ಪೊಲೀಸರು ಗಸ್ತು ತಿರುಗುತ್ತಿಲ್ಲ. ಹೀಗಾಗಿ, ಬಾಲಕರಿಗೆ ಯಾವುದೇ ಭಯವಿಲ್ಲದಂತಾಗಿದೆ. ಕೂಡಲೇ ಗಸ್ತು ಹೆಚ್ಚಿಸಬೇಕು’ ಎಂದು ಕೋರಿದ್ದಾರೆ.</p>.<p>ಪೊಲೀಸ್ ಕಮಿಷನರ್ ಕಚೇರಿ ಅಧಿಕಾರಿ, ‘ನಿಮ್ಮ ದೂರನ್ನು ಬಾಣಸವಾಡಿ ಠಾಣೆಗೆ ವರ್ಗಾಯಿಸಲಾಗಿದ್ದು, ಕ್ರಮಕ್ಕೆ ಸೂಚಿಸಲಾಗಿದೆ’ ಎಂದು ಹೇಳಿದ್ದಾರೆ.</p>.<p class="Subhead"><strong>ಉದ್ಯಾನದಲ್ಲಿ ಪರಿಶೀಲನೆ:</strong> ದೂರಿನ ಬಗ್ಗೆ ಹಿರಿಯ ಅಧಿಕಾರಿಗಳು ಮಾಹಿತಿ ನೀಡುತ್ತಿದ್ದಂತೆ, ಬಾಣಸವಾಡಿ ಪೊಲೀಸರು ಉದ್ಯಾನಕ್ಕೆ ಹೋಗಿ ಪರಿಶೀಲನೆ ನಡೆಸಿದರು. ಡ್ರಗ್ಸ್, ಧೂಮಪಾನದ ಕುರುಹುಗಳು ಪತ್ತೆಯಾದವು.</p>.<p>‘ದುಶ್ಚಟಗಳ ದಾಸರಾಗಿರುವ ಕೆಲ ಬಾಲಕರು, ಉದ್ಯಾನದಲ್ಲಿ ಗುಂಪು ಕಟ್ಟಿಕೊಂಡು ಓಡಾಡುತ್ತಿದ್ದಾರೆ. ವೈಟ್ನರ್ ಸೇರಿದಂತೆ ಕೆಲ ಮತ್ತು ಬರುವ ಡ್ರಗ್ಸ್ ಸೇವಿಸುತ್ತಿದ್ದಾರೆ. ಈ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಈಗಾಗಲೇ ಸ್ಥಳ ಪರಿಶೀಲನೆ ನಡೆಸಲಾಗಿದ್ದು, ಆ ಬಾಲಕರು ಯಾರು ಎಂಬುದನ್ನು ಪತ್ತೆ ಮಾಡುತ್ತಿದ್ದೇವೆ’ ಎಂದು ಬಾಣಸವಾಡಿ ಪೊಲೀಸರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಎಚ್ಬಿಆರ್ ಲೇಔಟ್ ಬಳಿಯ ಉದ್ಯಾನವೊಂದರಲ್ಲಿ ನಿತ್ಯವೂ ಕೆಲ ಬಾಲಕರು ಡ್ರಗ್ಸ್ ಸೇವಿಸುತ್ತಿದ್ದು, ಆ ಸಂಬಂಧ ಸ್ಥಳೀಯ ನಿವಾಸಿ ವಿಕ್ರಮ್ ಎಂಬುವರು ನಗರ ಪೊಲೀಸರಿಗೆ ಟ್ವಿಟರ್ ಮೂಲಕ ದೂರು ನೀಡಿದ್ದಾರೆ.</p>.<p>‘ಎಚ್ಬಿಆರ್ ಲೇಔಟ್ನ 3ನೇ ಹಂತದ 2ನೇ ಮುಖ್ಯರಸ್ತೆಯಲ್ಲಿರುವ ಉದ್ಯಾನದಲ್ಲಿ ಕೆಲ ಬಾಲಕರು, ಡ್ರಗ್ಸ್ ಸೇವಿಸುವುದು ಹಾಗೂ ಧೂಮಪಾನ ಮಾಡುವುದು ಮಾಡುತ್ತಿದ್ದಾರೆ. ಉದ್ಯಾನದಲ್ಲೆಲ್ಲ ಡ್ರಗ್ಸ್ನ ಕುರುಹುಗಳು ಬಿದ್ದಿವೆ’ ಎಂದು ವಿಕ್ರಮ್ ದೂರಿನಲ್ಲಿ ತಿಳಿಸಿದ್ದಾರೆ.</p>.<p>‘ಉದ್ಯಾನ ಹಾಗೂ ಅದರ ಸುತ್ತಮುತ್ತ ಹೆಚ್ಚಾಗಿ ಪೊಲೀಸರು ಗಸ್ತು ತಿರುಗುತ್ತಿಲ್ಲ. ಹೀಗಾಗಿ, ಬಾಲಕರಿಗೆ ಯಾವುದೇ ಭಯವಿಲ್ಲದಂತಾಗಿದೆ. ಕೂಡಲೇ ಗಸ್ತು ಹೆಚ್ಚಿಸಬೇಕು’ ಎಂದು ಕೋರಿದ್ದಾರೆ.</p>.<p>ಪೊಲೀಸ್ ಕಮಿಷನರ್ ಕಚೇರಿ ಅಧಿಕಾರಿ, ‘ನಿಮ್ಮ ದೂರನ್ನು ಬಾಣಸವಾಡಿ ಠಾಣೆಗೆ ವರ್ಗಾಯಿಸಲಾಗಿದ್ದು, ಕ್ರಮಕ್ಕೆ ಸೂಚಿಸಲಾಗಿದೆ’ ಎಂದು ಹೇಳಿದ್ದಾರೆ.</p>.<p class="Subhead"><strong>ಉದ್ಯಾನದಲ್ಲಿ ಪರಿಶೀಲನೆ:</strong> ದೂರಿನ ಬಗ್ಗೆ ಹಿರಿಯ ಅಧಿಕಾರಿಗಳು ಮಾಹಿತಿ ನೀಡುತ್ತಿದ್ದಂತೆ, ಬಾಣಸವಾಡಿ ಪೊಲೀಸರು ಉದ್ಯಾನಕ್ಕೆ ಹೋಗಿ ಪರಿಶೀಲನೆ ನಡೆಸಿದರು. ಡ್ರಗ್ಸ್, ಧೂಮಪಾನದ ಕುರುಹುಗಳು ಪತ್ತೆಯಾದವು.</p>.<p>‘ದುಶ್ಚಟಗಳ ದಾಸರಾಗಿರುವ ಕೆಲ ಬಾಲಕರು, ಉದ್ಯಾನದಲ್ಲಿ ಗುಂಪು ಕಟ್ಟಿಕೊಂಡು ಓಡಾಡುತ್ತಿದ್ದಾರೆ. ವೈಟ್ನರ್ ಸೇರಿದಂತೆ ಕೆಲ ಮತ್ತು ಬರುವ ಡ್ರಗ್ಸ್ ಸೇವಿಸುತ್ತಿದ್ದಾರೆ. ಈ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಈಗಾಗಲೇ ಸ್ಥಳ ಪರಿಶೀಲನೆ ನಡೆಸಲಾಗಿದ್ದು, ಆ ಬಾಲಕರು ಯಾರು ಎಂಬುದನ್ನು ಪತ್ತೆ ಮಾಡುತ್ತಿದ್ದೇವೆ’ ಎಂದು ಬಾಣಸವಾಡಿ ಪೊಲೀಸರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>