ವಿಚಾರಣೆ ನಡೆಸಿ ನ್ಯಾಯಮೂರ್ತಿ ಶ್ರೀನಿವಾಸ ಹರೀಶ್ಕುಮಾರ್, ‘ಎಫ್ಐಆರ್ ನಂಬದಿರಲು ಯಾವುದೇ ಆಧಾರ ಇಲ್ಲ. ಪ್ರಕರಣದ ಕುರಿತ ಎಲ್ಲ ಮಾಹಿತಿಯನ್ನೂ ಎಫ್ಐಆರ್ ಒಳಗೊಂಡಿರಬೇಕಿಲ್ಲ. ಪ್ರತ್ಯಕ್ಷದರ್ಶಿಗಳ ಹೇಳಿಕೆಯ ಸತ್ಯಾಸತ್ಯತೆಯನ್ನು ಪರೀಕ್ಷಿಸಲು ವಿಚಾರಣೆ ನಡೆಸಲು ಇನ್ನೂ ಅವಕಾಶ ಇದೆ’ ಎಂದು ತಿಳಿಸಿ ಜಾಮೀನು ಅರ್ಜಿ ತಿರಸ್ಕರಿಸಿದರು.