ವಿಚಾರಣೆ ವೇಳೆ ಎನ್ಎಚ್ಎಐ ಪರ ಹಾಜರಾಗಿದ್ದ ಡೆಪ್ಯೂಟಿ ಸಾಲಿಸಿಟರ್ ಜನರಲ್ ಎಚ್. ಶಾಂತಿಭೂಷಣ್, ‘ಬಿಬಿಎಂಪಿ ವ್ಯಾಪ್ತಿಯ ಎಂಟು ವಲಯಗಳಲ್ಲಿ ಈಗಾಗಲೇ ನಾಲ್ಕು ವಲಯಗಳಾದ ಬೊಮ್ಮನಹಳ್ಳಿ, ಯಲಹಂಕ, ಪಶ್ಚಿಮ ವಲಯ ಮತ್ತು ದಕ್ಷಿಣ ವಲಯಗಳಲ್ಲಿ ಮುಚ್ಚಲಾದ ರಸ್ತೆ ಗುಂಡಿ ಕಾಮಗಾರಿ ಮಾದರಿಯನ್ನು ತಪಾಸಣೆಗಾಗಿ ಉಪವಿಭಾಗೀಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಇನ್ನಷ್ಟೇ ಬರಬೇಕಿದ್ದು, ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಹತ್ತು ವಾರಗಳ ಕಾಲಾವಕಾಶ ನೀಡಬೇಕು’ ಎಂದು ಮನವಿ ಮಾಡಿದರು.