ಬೆಂಗಳೂರು: ಸದ್ಯ ತರಕಾರಿಗಳ ಬೆಲೆ ಕುಸಿತಗೊಂಡಿದ್ದು, ರೈತರು ಕಂಗಾಲಾಗಿದ್ದಾರೆ. ಈ ನಿಟ್ಟಿನಲ್ಲಿ ಬೆಳೆದ ಬೆಳೆಗಳನ್ನು ಹಾಳಾಗಲು ಬಿಡಬಾರದು ಎನ್ನುವ ಉದ್ದೇಶದಿಂದ ಹಾಪ್ಕಾಮ್ಸ್ ರಿಯಾಯಿತಿ ದರದಲ್ಲಿ ಮಾರಾಟ ಮೇಳವನ್ನು ಆಯೋಜಿಸಿದೆ.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹಾಪ್ಕಾಮ್ಸ್ನ ಅಧ್ಯಕ್ಷ ಎ.ಎಸ್.ಚಂದ್ರೇಗೌಡ, ‘ಇದೇ 6 ರಿಂದ 8ರವರೆಗೆ ಲಾಲ್ಬಾಗ್, ಕಬ್ಬನ್ ಪಾರ್ಕ್, ಹಡ್ಸನ್ ವೃತ್ತದ ಹಾಪ್ಕಾಮ್ಸ್ ಮಳಿಗೆಗಳಲ್ಲಿ ರಿಯಾಯಿತಿ ದರದಲ್ಲಿತರಕಾರಿ ಮಾರಾಟ ಮೇಳ ನಡೆಯಲಿದೆ’ ಎಂದು ತಿಳಿಸಿದರು.
‘ಹಬ್ಬದ ನಿಮಿತ್ತ ರಿಯಾಯಿತಿ ದರದಲ್ಲಿ 12 ಬಗೆಯ ತರಕಾರಿಗಳನ್ನು ಪ್ರತಿ ಕೆ.ಜಿಗೆ ₹20 ರಂತೆ ಮಾರಾಟ ಮಾಡಲಾಗುವುದು. ನೇರವಾಗಿ ರೈತರಿಂದ ಖರೀದಿ ಮಾಡುವುದರಿಂದ ಗ್ರಾಹಕರಿಗೆ ಗುಣಮಟ್ಟದತರಕಾರಿಗಳು ಸಿಗಲಿವೆ. ಅಲ್ಲದೇ, ರೈತರಿಗೂ ಉತ್ತಮ ಮಾರುಕಟ್ಟೆ ಸೌಲಭ್ಯವನ್ನು ಕಲ್ಪಿಸಿದಂತಾಗುತ್ತದೆ. ನಗರದಎಲ್ಲ ಹಾಪ್ಕಾಮ್ಸ್ ಮಳಿಗೆಗಳಲ್ಲೂ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ’ ಎಂದು ಹೇಳಿದರು.