<p><strong>ಬೆಂಗಳೂರು</strong>: ಸಾಹಿತಿ ಎಚ್.ಎಸ್.ವೆಂಕಟೇಶಮೂರ್ತಿ ಅವರು ರಚಿಸಿದ ಗೀತೆಗಳನ್ನು ಹಾಡುವ ಮೂಲಕ ಗಾಯಕಿ ಎಂ.ಡಿ. ಪಲ್ಲವಿ ನೆರೆದಿದ್ದವರನ್ನು ಭಾವಪರವಶಗೊಳಿಸಿದರೆ, ಅವರ ಒಡನಾಡಿಗಳು ಕನ್ನಡ ಕಾವ್ಯ ಪರಂಪರೆಗೆ ‘ಎಚ್ಚೆಸ್ವಿ’ ನೀಡಿದ ಕೊಡುಗೆಗಳ ಬಗ್ಗೆ ಗುಣಗಾನ ಮಾಡಿದರು. </p>.<p>ಕಪ್ಪಣ್ಣ ಅಂಗಳ ಹಾಗೂ ಸಮಂಜಸ ಬೆಂಗಳೂರು ಜಂಟಿಯಾಗಿ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಕಾವ್ಯ ಕಾಮಧೇನು ಎಚ್ಎಸ್ವಿ’ ಕಾರ್ಯಕ್ರಮದಲ್ಲಿ ಇತ್ತೀಚೆಗೆ ನಿಧನರಾದ ಎಚ್.ಎಸ್. ವೆಂಕಟೇಶಮೂರ್ತಿ ಅವರಿಗೆ ಗೀತ ಗೌರವ ಹಾಗೂ ನುಡಿ ನಮನ ಸಲ್ಲಿಸಲಾಯಿತು. </p>.<p>ಕವಿ ಬಿ.ಆರ್. ಲಕ್ಷ್ಮಣ ರಾವ್, ‘ವೆಂಕಟೇಶಮೂರ್ತಿ ಅವರು ಕೇವಲ ಭಾವಗೀತೆ ಕವಿಯಾಗದೆ, ಕನ್ನಡದ ಶ್ರೇಷ್ಠ ಕವಿಯಾಗಿದ್ದಾರೆ. ಸತ್ವಯುಕ್ತ ಮತ್ತು ಸಂಮೃದ್ಧವಾದ ಕಾವ್ಯ ಅವರದ್ದಾಗಿದೆ. ಕನ್ನಡ ಕಾವ್ಯಕ್ಕೆ ಅವರು ಅಕ್ಷಯಪಾತ್ರೆಯಾಗಿದ್ದು, ಕನ್ನಡ ಭಾಷೆ ಇರುವವರೆಗೆ ಅವರು ಇರುತ್ತಾರೆ’ ಎಂದು ಹೇಳಿದರು. </p>.<p>ವಿದ್ವಾಂಸ ಮಲ್ಲೇಪುರಂ ಜಿ. ವೆಂಕಟೇಶ್, ‘ಪುತಿನ ಅವರ ಭಾಗವತ ಪ್ರಜ್ಞೆ, ಕುವೆಂಪು ಅವರ ಭಾವ ಶಕ್ತಿ ಗ್ರಹಿಕೆ, ಬೇಂದ್ರೆ ಅವರ ನಾದ ಗುಣವನ್ನು ವೆಂಕಟೇಶಮೂರ್ತಿ ಮೈಗೂಡಿಸಿಕೊಂಡಿದ್ದರು. ಅವರು ಕಾವ್ಯ ಪ್ರತಿಭೆಯ ಪರಮೋಚ್ಚ ಜ್ಯೋತಿಯಾಗಿದ್ದಾರೆ’ ಎಂದು ಅಭಿಪ್ರಾಯಪಟ್ಟರು. </p>.<p>ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನ ಪ್ರಾಂಶುಪಾಲ ಚಾರ್ಲ್ಸ್ ಲಸ್ರಾಡೊ, ‘ಕನ್ನಡ ಅಧ್ಯಾಪಕರಾಗಿ ವೃತ್ತಿ ಆರಂಭಿಸಿದ ಅವರು, ಮೂರು ದಶಕಗಳ ಕಾಲ ನಮ್ಮ ಕಾಲೇಜಿನಲ್ಲಿ ಕಾರ್ಯನಿರ್ವಹಿಸಿದ್ದರು. ಕನ್ನಡ ಸಾಹಿತ್ಯಕ್ಕೆ ಅವರು ನೀಡಿದ ಕೊಡುಗೆ ಅನನ್ಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. </p>.<p>ಪರಿಶುದ್ಧ ಸಾಹಿತಿ: ಶಿಕ್ಷಣ ತಜ್ಞ ಪ್ರೊ.ಕೆ.ಈ. ರಾಧಾಕೃಷ್ಣ, ‘ಎಚ್ಚೆಸ್ವಿ ಅವರು ಅಚ್ಚಳಿಯದ ಹೆಜ್ಜೆ ಗುರುತನ್ನು ಬಿಟ್ಟು ಹೋಗಿದ್ದಾರೆ. ಪರಿಶುದ್ಧ ಸಾಹಿತಿಯಾಗಿ ಗುರುತಿಸಿಕೊಂಡರು. ಭಾವವನ್ನು ಸ್ಪರ್ಶಿಸುತ್ತಾ, ಚಿಂತನೆಗೆ ಹಚ್ಚಿದ ಕವಿ ಅವರು’ ಎಂದರು. </p>.<p>ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ, ‘ಪುಟ್ಟ ಗ್ರಾಮದಲ್ಲಿ ಜನಿಸಿದ ಅವರು, ಸ್ವಂತ ಪ್ರತಿಭೆಯ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಪ್ರಜ್ವಲಿಸಿದರು. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃತಿ ರಚಿಸಿರುವ ಅವರನ್ನು ಮರೆಯಲು ಸಾಧ್ಯವಿಲ್ಲ’ ಎಂದು ಹೇಳಿದರು. </p>.<p>ರಂಗಕರ್ಮಿ ಬಿ.ಜಯಶ್ರೀ ಅವರು ವೆಂಕಟೇಶಮೂರ್ತಿ ಅವರಿಗೆ ರಂಗ ಗೌರವ ಸಲ್ಲಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಸಾಹಿತಿ ಎಚ್.ಎಸ್.ವೆಂಕಟೇಶಮೂರ್ತಿ ಅವರು ರಚಿಸಿದ ಗೀತೆಗಳನ್ನು ಹಾಡುವ ಮೂಲಕ ಗಾಯಕಿ ಎಂ.ಡಿ. ಪಲ್ಲವಿ ನೆರೆದಿದ್ದವರನ್ನು ಭಾವಪರವಶಗೊಳಿಸಿದರೆ, ಅವರ ಒಡನಾಡಿಗಳು ಕನ್ನಡ ಕಾವ್ಯ ಪರಂಪರೆಗೆ ‘ಎಚ್ಚೆಸ್ವಿ’ ನೀಡಿದ ಕೊಡುಗೆಗಳ ಬಗ್ಗೆ ಗುಣಗಾನ ಮಾಡಿದರು. </p>.<p>ಕಪ್ಪಣ್ಣ ಅಂಗಳ ಹಾಗೂ ಸಮಂಜಸ ಬೆಂಗಳೂರು ಜಂಟಿಯಾಗಿ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಕಾವ್ಯ ಕಾಮಧೇನು ಎಚ್ಎಸ್ವಿ’ ಕಾರ್ಯಕ್ರಮದಲ್ಲಿ ಇತ್ತೀಚೆಗೆ ನಿಧನರಾದ ಎಚ್.ಎಸ್. ವೆಂಕಟೇಶಮೂರ್ತಿ ಅವರಿಗೆ ಗೀತ ಗೌರವ ಹಾಗೂ ನುಡಿ ನಮನ ಸಲ್ಲಿಸಲಾಯಿತು. </p>.<p>ಕವಿ ಬಿ.ಆರ್. ಲಕ್ಷ್ಮಣ ರಾವ್, ‘ವೆಂಕಟೇಶಮೂರ್ತಿ ಅವರು ಕೇವಲ ಭಾವಗೀತೆ ಕವಿಯಾಗದೆ, ಕನ್ನಡದ ಶ್ರೇಷ್ಠ ಕವಿಯಾಗಿದ್ದಾರೆ. ಸತ್ವಯುಕ್ತ ಮತ್ತು ಸಂಮೃದ್ಧವಾದ ಕಾವ್ಯ ಅವರದ್ದಾಗಿದೆ. ಕನ್ನಡ ಕಾವ್ಯಕ್ಕೆ ಅವರು ಅಕ್ಷಯಪಾತ್ರೆಯಾಗಿದ್ದು, ಕನ್ನಡ ಭಾಷೆ ಇರುವವರೆಗೆ ಅವರು ಇರುತ್ತಾರೆ’ ಎಂದು ಹೇಳಿದರು. </p>.<p>ವಿದ್ವಾಂಸ ಮಲ್ಲೇಪುರಂ ಜಿ. ವೆಂಕಟೇಶ್, ‘ಪುತಿನ ಅವರ ಭಾಗವತ ಪ್ರಜ್ಞೆ, ಕುವೆಂಪು ಅವರ ಭಾವ ಶಕ್ತಿ ಗ್ರಹಿಕೆ, ಬೇಂದ್ರೆ ಅವರ ನಾದ ಗುಣವನ್ನು ವೆಂಕಟೇಶಮೂರ್ತಿ ಮೈಗೂಡಿಸಿಕೊಂಡಿದ್ದರು. ಅವರು ಕಾವ್ಯ ಪ್ರತಿಭೆಯ ಪರಮೋಚ್ಚ ಜ್ಯೋತಿಯಾಗಿದ್ದಾರೆ’ ಎಂದು ಅಭಿಪ್ರಾಯಪಟ್ಟರು. </p>.<p>ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನ ಪ್ರಾಂಶುಪಾಲ ಚಾರ್ಲ್ಸ್ ಲಸ್ರಾಡೊ, ‘ಕನ್ನಡ ಅಧ್ಯಾಪಕರಾಗಿ ವೃತ್ತಿ ಆರಂಭಿಸಿದ ಅವರು, ಮೂರು ದಶಕಗಳ ಕಾಲ ನಮ್ಮ ಕಾಲೇಜಿನಲ್ಲಿ ಕಾರ್ಯನಿರ್ವಹಿಸಿದ್ದರು. ಕನ್ನಡ ಸಾಹಿತ್ಯಕ್ಕೆ ಅವರು ನೀಡಿದ ಕೊಡುಗೆ ಅನನ್ಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. </p>.<p>ಪರಿಶುದ್ಧ ಸಾಹಿತಿ: ಶಿಕ್ಷಣ ತಜ್ಞ ಪ್ರೊ.ಕೆ.ಈ. ರಾಧಾಕೃಷ್ಣ, ‘ಎಚ್ಚೆಸ್ವಿ ಅವರು ಅಚ್ಚಳಿಯದ ಹೆಜ್ಜೆ ಗುರುತನ್ನು ಬಿಟ್ಟು ಹೋಗಿದ್ದಾರೆ. ಪರಿಶುದ್ಧ ಸಾಹಿತಿಯಾಗಿ ಗುರುತಿಸಿಕೊಂಡರು. ಭಾವವನ್ನು ಸ್ಪರ್ಶಿಸುತ್ತಾ, ಚಿಂತನೆಗೆ ಹಚ್ಚಿದ ಕವಿ ಅವರು’ ಎಂದರು. </p>.<p>ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ, ‘ಪುಟ್ಟ ಗ್ರಾಮದಲ್ಲಿ ಜನಿಸಿದ ಅವರು, ಸ್ವಂತ ಪ್ರತಿಭೆಯ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಪ್ರಜ್ವಲಿಸಿದರು. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃತಿ ರಚಿಸಿರುವ ಅವರನ್ನು ಮರೆಯಲು ಸಾಧ್ಯವಿಲ್ಲ’ ಎಂದು ಹೇಳಿದರು. </p>.<p>ರಂಗಕರ್ಮಿ ಬಿ.ಜಯಶ್ರೀ ಅವರು ವೆಂಕಟೇಶಮೂರ್ತಿ ಅವರಿಗೆ ರಂಗ ಗೌರವ ಸಲ್ಲಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>