ಶಾಸಕ ಎಸ್.ಆರ್.ವಿಶ್ವನಾಥ್ ಮಾತನಾಡಿ, ‘ದೇಶಭಕ್ತಿ ಎಲ್ಲೆಡೆ ಮೂಡಬೇಕು ಎಂಬ ಉದ್ದೇಶದಿಂದ ಮೇಲ್ಸೇತುವೆಗೆ ವೀರ ಸಾವರ್ಕರ್ ಹೆಸರನ್ನಿಡಲಾಗಿದೆ. ಇದನ್ನು ವಿರೋಧಿಸುವವರು ಸಾವರ್ಕರ್ ಅವರ ಜೀವನಚರಿತ್ರೆ ಓದಬೇಕು. ಯಲಹಂಕದಲ್ಲಿ ಇದೇ ಮಾದರಿಯಲ್ಲಿ ಇನ್ನೂ 4 ಮೇಲ್ಸೇತುವೆಗಳನ್ನು ನಿರ್ಮಿಸಲಾಗುವುದು‘ ಎಂದು ತಿಳಿಸಿದರು.