ಪಶ್ಚಿಮ ಬಂಗಾಳದ 28 ಬ್ಯಾಂಕ್ ಖಾತೆ, ಕರ್ನಾಟಕದ 2 ಬ್ಯಾಂಕ್ ಖಾತೆಗಳಿಗೆ ಆರೋಪಿ ಹಣ ಜಮೆ ಮಾಡಿದ್ದರು. ಬ್ಯಾಂಕಿನ ಆಂತರಿಕ ಪರಿಶೀಲನೆ ವೇಳೆ ವಂಚನೆ ಬಯಲಾಗಿತ್ತು. ಈ ಬಗ್ಗೆ ಹನುಮಂತ ನಗರ ಠಾಣೆಗೆ ಇಂಡಿಯನ್ ಬ್ಯಾಂಕ್ ವಲಯ ಪ್ರಬಂಧಕ ಡಿ.ಎಸ್. ಮೂರ್ತಿ ದೂರು ನೀಡಿದ್ದರು.
ತನಿಖೆ ವೇಳೆ ಡೇಟಿಂಗ್ ಆ್ಯಪ್ ನಲ್ಲಿ ಪರಿಚಯವಾದ ಯುವತಿಗೆ ಹಣ ಪಾವತಿಸಿರುವುದಾಗಿ ಹರಿಶಂಕರ್ ಹೇಳಿದ್ದರು. ಡೇಟಿಂಗ್ ಆ್ಯಪ್ ನಲ್ಲಿ ಯುವತಿ ಸಂಪರ್ಕ ಬೆಳೆದಿದ್ದು, ಅಷ್ಟೂ ಹಣ ಅದೇ ಯುವತಿಗೆ ನೀಡಿರುವುದಾಗಿ ಹೇಳಿಕೆ ನೀಡಿದ್ದಾರೆ. ಆರೋಪಿಯ ಅಸ್ಪಷ್ಟ ಹೇಳಿಕೆಯಿಂದ ಪೊಲೀಸರು ತನಿಖೆ
ಮುಂದುವರಿಸಿದ್ದಾರೆ.