<p>ಬೆಂಗಳೂರು: ಇಲ್ಲಿನ ಕಾಶ್ ಫೌಂಡೇಶನ್ ‘ಪ್ಲೇ:ಎಕ್ಸ್ಪೆರಿಮೆಂಟ್ಸ್ ವಿಥ್ ಇಂಡಿಯನ್ ಮಿನಿಯೇಚರ್ಸ್’ ಶೀರ್ಷಿಕೆಯಡಿ ಬರ್ಲಿ ಸ್ಟ್ರೀಟ್ನ ಕಾಶ್ನಲ್ಲಿ ಹಮ್ಮಿಕೊಂಡಿರುವ ಚಿಕಣಿ ವರ್ಣಚಿತ್ರಗಳ (ಮಿನಿಯೇಚರ್ಸ್) ಪ್ರದರ್ಶನಕ್ಕೆ ಚಾಲನೆ ದೊರೆತಿದ್ದು, ಈ ಪ್ರದರ್ಶನ ಇದೇ 19ರವರೆಗೆ ನಡೆಯಲಿದೆ. </p>.<p>ಬೆಳಿಗ್ಗೆ 11ರಿಂದ ಸಂಜೆ 7 ಗಂಟೆಯವರೆಗೆ ಸಾರ್ವಜನಿಕರಿಗೆ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಇದು ಸಮೂಹ ಚಿತ್ರಕಲಾ ಪ್ರದರ್ಶನವಾಗಿದ್ದು, ವಿಜಯ್ ಸಿದ್ದರಾಮಪ್ಪ ಹಾಗರಗುಂಡಗಿ, ರಿಯಾಸುದ್ದೀನ್ ಹಾಗೂ ಗಾರ್ಗಿ ಚಂದೋಲ ಅವರ ಕಲಾಕೃತಿಗಳು ಪ್ರದರ್ಶನದಲ್ಲಿವೆ. ಸಾಂಪ್ರದಾಯಿಕ ಭಾರತೀಯ ಚಿಕಣಿ ಕಲೆಯನ್ನು ವಿಶಿಷ್ಟ ರೀತಿಯಲ್ಲಿ ಪ್ರಸ್ತುತಪಡಿಸಲಾಗಿದೆ. </p>.<p>ಕಲಬುರಗಿಯ ಹಾಗರಗುಂಡಗಿ ಅವರು ಸುರಪುರ ಶೈಲಿಯ ಡೆಕ್ಕನ್ ಚಿಕಣಿ ಕಲೆಯಲ್ಲಿ ಪ್ರಸಿದ್ಧಿ ಪಡೆದಿದ್ದು, ಅವರ 12 ಕಲಾಕೃತಿಗಳು ಪ್ರದರ್ಶನದಲ್ಲಿವೆ. ಈ ಕಲಾಕೃತಿಗಳು ಪ್ರಮುಖವಾಗಿ ಪೌರಾಣಿಕ ದಂತಕಥೆಗಳನ್ನು ಕೇಂದ್ರೀಕರಿಸಿವೆ. ಜೈಪುರದ ರಿಯಾಸುದ್ದೀನ್ ಅವರು ರಜಪೂತ ಚಿಕಣಿ ಶೈಲಿಯ ವರ್ಣಚಿತ್ರಗಳನ್ನು ಪ್ರಸ್ತುಪಡಿಸಿದ್ದಾರೆ. ನವದೆಹಲಿಯ ಚಂದೋಲ ಅವರು ಸಮಕಾಲೀನ ವಿಷಯಗಳನ್ನು ಆಧರಿಸಿ, ಚಿಕಣಿ ವರ್ಣಚಿತ್ರಗಳನ್ನು ರಚಿಸಿದ್ದಾರೆ. </p>.<p>ಈ ಚಿತ್ರಕಲೆ ಪ್ರದರ್ಶನವು ಕಾಶ್ನ ಸಂಸ್ಥಾಪನಾ ಸದಸ್ಯ ಮಂಜು ಸಾರಾ ರಾಜನ್ ಅವರ ಪರಿಕಲ್ಪನೆಯಾಗಿದೆ. ವಾಸ್ತುಶಿಲ್ಪವನ್ನು ಡೇವಿಡ್ ಜೊ ಥಾಮಸ್ ವಿನ್ಯಾಸಗೊಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ಇಲ್ಲಿನ ಕಾಶ್ ಫೌಂಡೇಶನ್ ‘ಪ್ಲೇ:ಎಕ್ಸ್ಪೆರಿಮೆಂಟ್ಸ್ ವಿಥ್ ಇಂಡಿಯನ್ ಮಿನಿಯೇಚರ್ಸ್’ ಶೀರ್ಷಿಕೆಯಡಿ ಬರ್ಲಿ ಸ್ಟ್ರೀಟ್ನ ಕಾಶ್ನಲ್ಲಿ ಹಮ್ಮಿಕೊಂಡಿರುವ ಚಿಕಣಿ ವರ್ಣಚಿತ್ರಗಳ (ಮಿನಿಯೇಚರ್ಸ್) ಪ್ರದರ್ಶನಕ್ಕೆ ಚಾಲನೆ ದೊರೆತಿದ್ದು, ಈ ಪ್ರದರ್ಶನ ಇದೇ 19ರವರೆಗೆ ನಡೆಯಲಿದೆ. </p>.<p>ಬೆಳಿಗ್ಗೆ 11ರಿಂದ ಸಂಜೆ 7 ಗಂಟೆಯವರೆಗೆ ಸಾರ್ವಜನಿಕರಿಗೆ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಇದು ಸಮೂಹ ಚಿತ್ರಕಲಾ ಪ್ರದರ್ಶನವಾಗಿದ್ದು, ವಿಜಯ್ ಸಿದ್ದರಾಮಪ್ಪ ಹಾಗರಗುಂಡಗಿ, ರಿಯಾಸುದ್ದೀನ್ ಹಾಗೂ ಗಾರ್ಗಿ ಚಂದೋಲ ಅವರ ಕಲಾಕೃತಿಗಳು ಪ್ರದರ್ಶನದಲ್ಲಿವೆ. ಸಾಂಪ್ರದಾಯಿಕ ಭಾರತೀಯ ಚಿಕಣಿ ಕಲೆಯನ್ನು ವಿಶಿಷ್ಟ ರೀತಿಯಲ್ಲಿ ಪ್ರಸ್ತುತಪಡಿಸಲಾಗಿದೆ. </p>.<p>ಕಲಬುರಗಿಯ ಹಾಗರಗುಂಡಗಿ ಅವರು ಸುರಪುರ ಶೈಲಿಯ ಡೆಕ್ಕನ್ ಚಿಕಣಿ ಕಲೆಯಲ್ಲಿ ಪ್ರಸಿದ್ಧಿ ಪಡೆದಿದ್ದು, ಅವರ 12 ಕಲಾಕೃತಿಗಳು ಪ್ರದರ್ಶನದಲ್ಲಿವೆ. ಈ ಕಲಾಕೃತಿಗಳು ಪ್ರಮುಖವಾಗಿ ಪೌರಾಣಿಕ ದಂತಕಥೆಗಳನ್ನು ಕೇಂದ್ರೀಕರಿಸಿವೆ. ಜೈಪುರದ ರಿಯಾಸುದ್ದೀನ್ ಅವರು ರಜಪೂತ ಚಿಕಣಿ ಶೈಲಿಯ ವರ್ಣಚಿತ್ರಗಳನ್ನು ಪ್ರಸ್ತುಪಡಿಸಿದ್ದಾರೆ. ನವದೆಹಲಿಯ ಚಂದೋಲ ಅವರು ಸಮಕಾಲೀನ ವಿಷಯಗಳನ್ನು ಆಧರಿಸಿ, ಚಿಕಣಿ ವರ್ಣಚಿತ್ರಗಳನ್ನು ರಚಿಸಿದ್ದಾರೆ. </p>.<p>ಈ ಚಿತ್ರಕಲೆ ಪ್ರದರ್ಶನವು ಕಾಶ್ನ ಸಂಸ್ಥಾಪನಾ ಸದಸ್ಯ ಮಂಜು ಸಾರಾ ರಾಜನ್ ಅವರ ಪರಿಕಲ್ಪನೆಯಾಗಿದೆ. ವಾಸ್ತುಶಿಲ್ಪವನ್ನು ಡೇವಿಡ್ ಜೊ ಥಾಮಸ್ ವಿನ್ಯಾಸಗೊಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>