<p><strong>ಬೆಂಗಳೂರು:</strong> ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎಎಲ್) ಇಂಡಿಗೊ ವಿಮಾನ ಸಂಸ್ಥೆಯ ಕಂಪ್ಯೂಟರ್ ಸರ್ವರ್ ಕೈಕೊಟ್ಟಿದ್ದರಿಂದ ನೂರಾರು ಪ್ರಯಾಣಿಕರು ಪರದಾಡಿದರು.</p>.<p>ಸೋಮವಾರ ಬೆಳಗಿನ ಜಾವ 4.29ರಿಂದ 5.07 ರವರೆಗೆ ತಾಂತ್ರಿಕ ಕಾರಣಕ್ಕೆ ಸರ್ವರ್ ಕೈಕೊಟ್ಟಿದ್ದರಿಂದ ಬೆಂಗಳೂರಿನಿಂದ ಹೊರಡಬೇಕಾಗಿದ್ದ ವಿಮಾನಗಳು ಮಾತ್ರವಲ್ಲ, ಬೇರೆ ವಿಮಾನ ನಿಲ್ದಾಣಗಳಿಂದ ಹೊರಡಬೇಕಾದ ವಿಮಾನಗಳು ವಿಳಂಬವಾಗಿ ಹಾರಾಟ ನಡೆಸಿದವು.</p>.<p>ಕೆಟ್ಟಿದ್ದ ಸರ್ವರ್ ಅನ್ನು ಸರಿಪಡಿಸಿವಿಮಾನ ಹಾರಾಟವನ್ನು ಆರಂಭಿಸಲಾಯಿತು. ಪ್ರಯಾಣಿಕರಿಗೆ ಆದ ತೊಂದರೆಗಾಗಿ ವಿಷಾದಿಸುವುದಾಗಿ ಕಂಪನಿ ಅಧಿಕೃತ ಪ್ರಕಟಣೆ ಹೇಳಿದೆ.</p>.<p>ವಿಮಾನ ನಿಲ್ದಾಣಗಳ ಭದ್ರತೆ ಹೆಚ್ಚಿಸಿರುವುದರಿಂದ ಮೊದಲೇ ತೊಂದರೆ ಅನುಭವಿಸುತ್ತಿರುವ ಪ್ರಯಾಣಿಕರು ಸರ್ವರ್ ಕೈಕೊಟ್ಟ ಕಾರಣಕ್ಕೆ ಇನ್ನಷ್ಟು ಕಿರಿಕಿರಿ ಅನುಭವಿಸಿದರು. ಇದರಿಂದಾಗಿ ಬೆಂಗಳೂರು, ಪುಣೆ, ಮುಂಬೈ ಹೈದರಾಬಾದ್, ಚೆನ್ನೈಗಳಲ್ಲಿ ಪ್ರಯಾ<br />ಣಿಕರ ನಿರ್ಗಮನದ ಕೌಂಟರ್ಗಳಲ್ಲಿ ಉದ್ದುದ್ದ ಸಾಲು ಕಂಡುಬಂತು.</p>.<p>ಸಮಸ್ಯೆಯ ತೀವ್ರತೆ ಅರ್ಥ ಮಾಡಿಕೊಂಡ ಕಂಪನಿ ಸಿಬ್ಬಂದಿ ಬೋರ್ಡಿಂಗ್ ಪಾಸ್ಗಳನ್ನು ಬರೆದು ವಿತರಿಸಿದರಾದರೂ ಈ ಪ್ರಕ್ರಿಯೆಯೂ ವಿಳಂಬವಾಯಿತು ಎಂದು ಪ್ರಯಾಣಿಕರು ದೂರಿದರು. ಸರ್ವರ್ ಕೆಲಸ ಮಾಡದ್ದರಿಂದ ಅತೃಪ್ತರಾದ ಪ್ರಯಾಣಿಕರು ಟ್ವಿಟರ್, ಫೇಸ್ಬುಕ್ಗಳಲ್ಲಿ ತಮ್ಮ ಅಸಹನೆ ಹೊರ ಹಾಕಿದರು.</p>.<p>ದೀಪೇಶ್ ಅಗರವಾಲ್ ಹಾಗೂ ಶಿವಕುಮಾರ್ ಆರ್. ಎಂಬುವರು ಟ್ವೀಟ್ ಮಾಡಿ, ‘ಇಂಡಿಗೊ ನಿರ್ಗಮನ ಕೌಂಟರ್ಗಳ ಮುಂದೆ ಅಕ್ಷರಶಃ ಭಾರಿ ಗೊಂದಲ ಸೃಷ್ಟಿಯಾಯಿತು. ಸುಮಾರು ಎರಡು ಗಂಟೆಗಳ ಕಾಲ ಪ್ರಯಾಣಿಕರು ಪರದಾಡಿ<br />ದರು’ ಎಂದಿದ್ದಾರೆ.</p>.<p>ಪ್ರತಿನಿತ್ಯ 1,300 ಇಂಡಿಗೊ ವಿಮಾನಗಳು ಹಾರಾಡುತ್ತವೆ. ಏನೇ ಏರುಪೇರಾದರೂ ಅವುಗಳ ಪರಿಣಾಮ ಉಳಿದ ವಿಮಾನಗಳ ಮೇಲೂ ಆಗುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎಎಲ್) ಇಂಡಿಗೊ ವಿಮಾನ ಸಂಸ್ಥೆಯ ಕಂಪ್ಯೂಟರ್ ಸರ್ವರ್ ಕೈಕೊಟ್ಟಿದ್ದರಿಂದ ನೂರಾರು ಪ್ರಯಾಣಿಕರು ಪರದಾಡಿದರು.</p>.<p>ಸೋಮವಾರ ಬೆಳಗಿನ ಜಾವ 4.29ರಿಂದ 5.07 ರವರೆಗೆ ತಾಂತ್ರಿಕ ಕಾರಣಕ್ಕೆ ಸರ್ವರ್ ಕೈಕೊಟ್ಟಿದ್ದರಿಂದ ಬೆಂಗಳೂರಿನಿಂದ ಹೊರಡಬೇಕಾಗಿದ್ದ ವಿಮಾನಗಳು ಮಾತ್ರವಲ್ಲ, ಬೇರೆ ವಿಮಾನ ನಿಲ್ದಾಣಗಳಿಂದ ಹೊರಡಬೇಕಾದ ವಿಮಾನಗಳು ವಿಳಂಬವಾಗಿ ಹಾರಾಟ ನಡೆಸಿದವು.</p>.<p>ಕೆಟ್ಟಿದ್ದ ಸರ್ವರ್ ಅನ್ನು ಸರಿಪಡಿಸಿವಿಮಾನ ಹಾರಾಟವನ್ನು ಆರಂಭಿಸಲಾಯಿತು. ಪ್ರಯಾಣಿಕರಿಗೆ ಆದ ತೊಂದರೆಗಾಗಿ ವಿಷಾದಿಸುವುದಾಗಿ ಕಂಪನಿ ಅಧಿಕೃತ ಪ್ರಕಟಣೆ ಹೇಳಿದೆ.</p>.<p>ವಿಮಾನ ನಿಲ್ದಾಣಗಳ ಭದ್ರತೆ ಹೆಚ್ಚಿಸಿರುವುದರಿಂದ ಮೊದಲೇ ತೊಂದರೆ ಅನುಭವಿಸುತ್ತಿರುವ ಪ್ರಯಾಣಿಕರು ಸರ್ವರ್ ಕೈಕೊಟ್ಟ ಕಾರಣಕ್ಕೆ ಇನ್ನಷ್ಟು ಕಿರಿಕಿರಿ ಅನುಭವಿಸಿದರು. ಇದರಿಂದಾಗಿ ಬೆಂಗಳೂರು, ಪುಣೆ, ಮುಂಬೈ ಹೈದರಾಬಾದ್, ಚೆನ್ನೈಗಳಲ್ಲಿ ಪ್ರಯಾ<br />ಣಿಕರ ನಿರ್ಗಮನದ ಕೌಂಟರ್ಗಳಲ್ಲಿ ಉದ್ದುದ್ದ ಸಾಲು ಕಂಡುಬಂತು.</p>.<p>ಸಮಸ್ಯೆಯ ತೀವ್ರತೆ ಅರ್ಥ ಮಾಡಿಕೊಂಡ ಕಂಪನಿ ಸಿಬ್ಬಂದಿ ಬೋರ್ಡಿಂಗ್ ಪಾಸ್ಗಳನ್ನು ಬರೆದು ವಿತರಿಸಿದರಾದರೂ ಈ ಪ್ರಕ್ರಿಯೆಯೂ ವಿಳಂಬವಾಯಿತು ಎಂದು ಪ್ರಯಾಣಿಕರು ದೂರಿದರು. ಸರ್ವರ್ ಕೆಲಸ ಮಾಡದ್ದರಿಂದ ಅತೃಪ್ತರಾದ ಪ್ರಯಾಣಿಕರು ಟ್ವಿಟರ್, ಫೇಸ್ಬುಕ್ಗಳಲ್ಲಿ ತಮ್ಮ ಅಸಹನೆ ಹೊರ ಹಾಕಿದರು.</p>.<p>ದೀಪೇಶ್ ಅಗರವಾಲ್ ಹಾಗೂ ಶಿವಕುಮಾರ್ ಆರ್. ಎಂಬುವರು ಟ್ವೀಟ್ ಮಾಡಿ, ‘ಇಂಡಿಗೊ ನಿರ್ಗಮನ ಕೌಂಟರ್ಗಳ ಮುಂದೆ ಅಕ್ಷರಶಃ ಭಾರಿ ಗೊಂದಲ ಸೃಷ್ಟಿಯಾಯಿತು. ಸುಮಾರು ಎರಡು ಗಂಟೆಗಳ ಕಾಲ ಪ್ರಯಾಣಿಕರು ಪರದಾಡಿ<br />ದರು’ ಎಂದಿದ್ದಾರೆ.</p>.<p>ಪ್ರತಿನಿತ್ಯ 1,300 ಇಂಡಿಗೊ ವಿಮಾನಗಳು ಹಾರಾಡುತ್ತವೆ. ಏನೇ ಏರುಪೇರಾದರೂ ಅವುಗಳ ಪರಿಣಾಮ ಉಳಿದ ವಿಮಾನಗಳ ಮೇಲೂ ಆಗುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>