ಬೆಂಗಳೂರು: ‘ಆದಾಯ ತೆರಿಗೆ (ಐ.ಟಿ) ಇಲಾಖೆಯ ಲೆಕ್ಕ ಪರಿಶೋಧಕನೆಂದು ಹೇಳಿದ್ದ ನಾಗೇಶ್ ಶಾಸ್ತ್ರಿ ಎಂಬಾತ, ಆದಾಯ ತೆರಿಗೆ ಪಾವತಿಸುವುದಾಗಿ ಹೇಳಿ ₹ 65 ಲಕ್ಷ ಪಡೆದು ವಂಚಿಸಿ ದ್ದಾನೆ’ ಎಂದು ಆರೋಪಿಸಿ ಉದ್ಯಮಿ ರಕ್ಷಿತ್ ಎಂಬುವರು ಅನ್ನಪೂರ್ಣೇಶ್ವರಿ ನಗರ ಠಾಣೆಗೆ ದೂರು ನೀಡಿದ್ದಾರೆ.
‘ಆದಾಯ ತೆರಿಗೆ ಇಲಾಖೆಯದ್ದು ಎಂದು ನಾಗೇಶ್ ನಕಲಿ ರಶೀದಿ ನೀಡಿದ್ದ. ಠಾಣೆಗೆ ಬಂದ ಮೇಲೆಯೇ ವಂಚನೆ ಹೋಗಿದ್ದು ಕೆ.ಎಚ್.ಬಿ ಕಾಲೊನಿ ನಿವಾಸಿ ರಕ್ಷಿತ್ ಅವರಿಗೆ ತಿಳಿಯಿತು. ರಕ್ಷಿತ್ ದೂರು ಆಧರಿಸಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.