‘ಗೋವಿಂದರಾಜು ಅವರ ಎರಡು ಲಾರಿ ಹೊಂದಿದ್ದು, ಮಣ್ಣನ್ನು ಹೆಮ್ಮಿಗೆಪುರ ಹಾಗೂ ಐರಾ ಸ್ಕೂಲ್ ಪಕ್ಕದ ಖಾಲಿ ಜಾಗದಲ್ಲಿ ಅನ್ಲೋಡ್ ಮಾಡುತ್ತಿದ್ದರು. ಲಿಂಗಮೂರ್ತಿ ಅವರು ಜೆ.ಸಿ.ಬಿ ಯಂತ್ರ ಹೊಂದಿದ್ದು, ಅನ್ಲೋಡ್ ಮಾಡಿದ ಮಣ್ಣನ್ನು ಸಮತಟ್ಟು ಮಾಡುವ ಕೆಲಸ ಮಾಡುತ್ತಿದ್ದರು. ಶನಿವಾರ ಬೆಳಿಗ್ಗೆ 6 ಗಂಟೆ ಸುಮಾರಿಗೆ ಲಿಂಗಮೂರ್ತಿ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಚಿರಂಜೀವಿ ಹಾಗೂ ಇತರೆ ಆರೋಪಿಗಳು ಬಂದಿದ್ದರು. ಅಲ್ಲಿ ನಡೆದ ನಡೆದ ಗಲಾಟೆಯಲ್ಲಿ ಚಾಕುವಿನಿಂದ ಇರಿದು ಆರೋಪಿಗಳು ಪರಾರಿ ಆಗಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ಗೋವಿಂದರಾಜು ಅವರ ಸ್ನೇಹಿತ ಮಂಜು, ಬಿಜಿಎಸ್ ಆಸ್ಪತ್ರೆಗೆ ಸೇರಿದ್ದರು. ಅಲ್ಲಿ ಮೃತಪಟ್ಟಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.