ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗದ ಆಮಿಷ: ₹ 10 ಲಕ್ಷ ವಂಚಿಸಿದ್ದ 6 ಮಂದಿ ಸೆರೆ

ಸರ್ಕಾರಿ ಉದ್ಯೋಗದ ಆಮಿಷ
Last Updated 22 ಅಕ್ಟೋಬರ್ 2021, 19:55 IST
ಅಕ್ಷರ ಗಾತ್ರ

ಹೊಸಕೋಟೆ: ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ₹ 10 ಲಕ್ಷ ಪಡೆದು ವಂಚಿಸಿದ್ದ ಆರು ಮಂದಿ ಆರೋಪಿಗಳನ್ನು ಹೊಸಕೋಟೆ ಪೊಲೀಸರು ಬಂಧಿಸಿದ್ದಾರೆ.

ಬಳ್ಳಾರಿ ಮೂಲದ ಎಚ್.ವಿ. ಅಜಯ್ ಕುಮಾರ್(41), ಬೆಂಗಳೂರಿನ ಬಿದರಹಳ್ಳಿ ಹೋಬಳಿ ಆವಲಹಳ್ಳಿಯ ಜ್ಞಾನಮೂರ್ತಿ(42), ಮಾಲೂರು ತಾಲ್ಲೂಕಿನ ಮಾಸ್ತಿಯ ಬಿ.ಕೆ. ರವೀಂದ್ರ (36), ಬೈರಸಂದ್ರ ಗ್ರಾಮದ ಮುರುಗೇಶ್ (27), ಕುಡಿಯನೂರು ಗ್ರಾಮದ ಜಿ. ಮುನಿರಾಜು (33) ಹಾಗೂ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೂಲದ ಆರ್. ಕುಮಾರಸ್ವಾಮಿ (38) ಬಂಧಿತರು.

ಆರೋಪಿಗಳಿಂದ ₹ 7.14 ಲಕ್ಷ ನಗದು, ಎರಡು ಕಾರು, 2 ವಾಕಿಟಾಕಿ, ಒಂದು ಲಾಟಿ, ಒಂದು ಮಿಲ್ಟ್ರಿ ಟೋಪಿ ಹಾಗೂ 6 ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಯಲಹಂಕ ಅಗ್ರಹಾರದಲ್ಲಿ ಆರೋಪಿಗಳು ವಾಸಿಸುತ್ತಿದ್ದರು. ಪ್ರಮುಖ ಆರೋಪಿ ಶಿವಕುಮಾರ್ ಪರಾರಿಯಾಗಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT