‘ಈ ದೂರುಗಳ ಜತೆಯಲ್ಲೇ ನೀಡಿದ್ದ ಇತರ ಮೂರು ದೂರುಗಳ ಬಗ್ಗೆ ಎಫ್ಐಆರ್ ದಾಖಲಿಸಲಾಗಿದೆ. ಆದರೆ, ಇಂದ್ರಕಲಾ ವಿರುದ್ಧದ ದೂರಿನ ಕುರಿತು ಎಸಿಬಿ ಅಧಿಕಾರಿಗಳು ಆರಂಭದಿಂದಲೂ ಹಿಂದೇಟು ಹಾಕಿದ್ದರು. ನ್ಯಾಯಾಧೀಶರ ರಕ್ಷಣೆ ಕಾಯ್ದೆ ನಿವೃತ್ತ ನ್ಯಾಯಮೂರ್ತಿ ಲಂಚ ನೀಡಿರುವುದಕ್ಕೆ ಅನ್ವಯವಾಗುವುದಿಲ್ಲ ಎಂದು ನಾವು ಮನವರಿಕೆ ಮಾಡಿದ್ದೆವು. ಅದನ್ನು ಕಡೆಗಣಿಸಿ ದೂರನ್ನು ವರ್ಗಾವಣೆ ಮಾಡಲಾಗಿದೆ’ ಎಂದು ಆದರ್ಶ್ ಅಯ್ಯರ್, ಪರಿಷತ್ನ ಇನ್ನೊಬ್ಬ ಸಹ ಅಧ್ಯಕ್ಷ ಪ್ರಕಾಶ್ ಬಾಬು ಬಿ.ಕೆ. ಮತ್ತು ಕಾರ್ಯಕಾರಿ ಸಮಿತಿ ಸದಸ್ಯ ವಿಶ್ವನಾಥ್ ವಿ.ಬಿ. ಹೇಳಿಕೆಯಲ್ಲಿ ತಿಳಿಸಿದ್ದಾರೆ.