ಬುಧವಾರ ಮಧ್ಯಾಹ್ನ ಸುಮಾರು 3 ಗಂಟೆಯಲ್ಲಿ ರಾಮಮೂರ್ತಿ ನಗರ , ಕಲ್ಕೆರೆ ಮುಖ್ಯ ರಸ್ತೆ , ಪಂಜಾಬ್ ನ್ಯಾಷನಲ್ ಬ್ಯಾಂಕ್ ಎದುರುಗಡೆ ಇರುವ ಸ್ಟೇಷನರಿ ಅಂಗಡಿಗೆ ಕಾರ್ ಮತ್ತು ಬೈಕ್ ಗಳಲ್ಲಿ ಬಂದ ಎಂಟು ಮಂದಿ ಆರೋಪಿಗಳು, ‘ನಿಮ್ಮ ಅಂಗಡಿಯಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಇದೆ. ನಾವು ಸಿಸಿಬಿ ಪೊಲೀಸರು. ಪರಿಶೀಲಿಸಲು ಬಂದಿದ್ದೇವೆ. ₹3 ಲಕ್ಷ ಕೊಟ್ಟರೆ ಬಿಡುತ್ತೇವೆ. ಇಲ್ಲದಿದ್ದರೆ ಅಂಗಡಿಯನ್ನು ಜಪ್ತಿ ಮಾಡಿ ಜೈಲಿಗೆ ಕಳುಹಿಸುತ್ತೇವೆ’ ಎಂದು ಹೆದರಿಸಿದ್ದಾರೆ. ನಂತರ ಸಿಕ್ಕಷ್ಟು ದುಡ್ಡು ಎತ್ತಿಕೊಂಡು ಹೋಗಿದ್ದಾರೆ.