ಬೆಂಗಳೂರು: ಕಲಾ ಗಂಗೋತ್ರಿ ರಂಗ ತಂಡವು ಸೆ.5ರಂದು ಸಂಜೆ 4ಗಂಟೆಗೆ ಜೆ.ಸಿ. ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ 50ನೇ ವರ್ಷದ ರಂಗ ಹಬ್ಬದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
‘ಮುಖ್ಯಮಂತ್ರಿ’ ಹಾಗೂ ‘ಮತ್ತೆ ಮುಖ್ಯಮಂತ್ರಿ’ ರಾಜಕೀಯ ನಾಟಕಗಳ ವಿಶ್ಲೇಷಣೆ ರವೀಂದ್ರ ಕಲಾಕ್ಷೇತ್ರದ ಮಹಿಳೆಯರ ವಿಶ್ರಾಂತಿ ಕೊಠಡಿಯಲ್ಲಿ ಸಂಜೆ 4ರಿಂದ 5.30ರವರೆಗೆ ನಡೆಯಲಿದೆ. ಸಂಜೆ 6ರಿಂದ ‘ಮುಖ್ಯಮಂತ್ರಿ’ ಚಂದ್ರು ಅವರು ರಚಿಸಿದ ಅವರ ಜೀವನ ಪಯಣದ ಕೃತಿ ‘ರಂಗವನದ ಚಂದ್ರತಾರೆ’ ಬಿಡುಗಡೆಯಾಗಲಿದೆ.
ಸಂಜೆ 7 ಗಂಟೆಗೆ ‘ಮತ್ತೆ ಮುಖ್ಯಮಂತ್ರಿ’ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಈ ನಾಟಕವನ್ನು ಕೆ.ವೈ. ನಾರಾಯಣಸ್ವಾಮಿ ರಚಿಸಿದ್ದು, ಬಿ.ವಿ. ರಾಜಾರಾಂ ನಿರ್ದೇಶಿಸಿದ್ದಾರೆ. ಪ್ರಧಾನ ಪಾತ್ರದಲ್ಲಿ ‘ಮುಖ್ಯಮಂತ್ರಿ’ ಚಂದ್ರು ಕಾಣಿಸಿಕೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.