ಶೇಷಶಾಸ್ತ್ರಿ ಅವರ ‘ಕರ್ನಾಟಕದ ವೀರಗಲ್ಲುಗಳು’ ಸಂಶೋಧನಾ ಗ್ರಂಥ ದೇಶದ ಇನ್ನಾವ ಭಾಷೆಯಲ್ಲೂ ಬಂದಿಲ್ಲ. ಅವರ ಶಾಸನ ಶಾಸ್ತ್ರ ಪರಿಚಯ ಅಪೂರ್ವ ಕೃತಿ. ತೆಲುಗಿನಿಂದ ಕನ್ನಡಕ್ಕೆ, ಕನ್ನಡದಿಂದ ತೆಲುಗಿಗೆ ಹಲವು ಶ್ರೇಷ್ಠ ಕೃತಿಗಳನ್ನು ಅವರು ಅನುವಾದ ಮಾಡಿದ್ದಾರೆ. ಈಗಲಾದರೂ ಅವರನ್ನು ರಾಜ್ಯ ಸರ್ಕಾರ ಗೌರವಿಸುವ ಕೆಲಸ ಮಾಡಲಿ’ ಎಂದು ಬಳಗದ ಸಂಚಾಲಕ ರಾ.ನಂ. ಚಂದ್ರಶೇಖರ್ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.