ಬೆಂಗಳೂರು: ‘ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್ಸಿ), ನಾಗರಿಕತೆ ತಿದ್ದುಪಡಿ ಮಸೂದೆ, ಕಾಶ್ಮೀರದಲ್ಲಿ 370 ವಿಧಿ ರದ್ದು, ನೋಟು ರದ್ದತಿಯಂತಹ ಕೇಂದ್ರ ಸರ್ಕಾರದ ನಿರ್ಧಾರಗಳಿಗೆ ಗೊತ್ತು ಗುರಿ ಏನೂ ಇಲ್ಲ. ಇದು ಕಾರಿನ ಹಿಂದೆ ನಾಯಿಯೊಂದು ಓಡಿದಂತೆ’ ಎಂದು ಐಎಎಸ್ ಹುದ್ದೆಗೆ ರಾಜೀನಾಮೆ ನೀಡಿರುವ ಕಣ್ಣನ್ ಗೋಪಿನಾಥನ್ ಟೀಕಿಸಿದರು.