ಕೆ.ಆರ್. ಪುರ: ಮಹದೇವಪುರ ಕ್ಷೇತ್ರದ ಕಣ್ಣೂರು ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಅಶೋಕ್ ಕುಮಾರ್ ಮತ್ತು ಉಪಾಧ್ಯಕ್ಷರಾಗಿ ಲಲಿತಾ ದೇವರಾಜ್ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಮೋಹನ್ ತಿಳಿಸಿದರು.
ಒಟ್ಟು 31 ಸದಸ್ಯರಲ್ಲಿ ಅಶೋಕ್ ಕುಮಾರ್ ಪರವಾಗಿ 19 ಮತಗಳು ಬಂದರೆ, ಗೋಪಾಲ ಕೃಷ್ಣ ಪರವಾಗಿ 12 ಮತಗಳು ಚಲಾವಣೆಯಾದವು. ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಲಲಿತಾ ದೇವರಾಜ್ 18 ಮತ ಪಡೆದು ಆಯ್ಕೆಯಾದರು. ಆಂಜಿನಮ್ಮ ಪರವಾಗಿ 13 ಮತಗಳು ಬಂದವು.
ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ನಟರಾಜ್, ಮುಖಂಡರಾದ ಪಾಪಣ್ಣ, ಬೈರತಿ ರಮೇಶ್, ಬಿದರಹಳ್ಳಿ ರಾಜೇಶ್, ಮೋಹನ ರೆಡ್ಡಿ, ನಾರಾಯಣ ಟಿ.ಪಿ., ಹೂಡಿ ಪಿಳ್ಳಪ್ಪ, ಮಹೇಶ್, ರಘುನಾಥ್ ಜನಾರ್ದನ ಗೌಡ ಹಾಗೂ ಪಂಚಾಯತಿ ಸದಸ್ಯರು ಇದ್ದರು.