‘ಪಂಚಮಸಾಲಿ ಸಮುದಾಯವನ್ನು ‘ಪ್ರವರ್ಗ–3ಬಿ’ಯಲ್ಲಿಯೇ ಮುಂದುವರಿಸುವಂತೆ ಎಚ್.ಕಾಂತರಾಜ ಆಯೋಗವು 2018ರಲ್ಲಿ ಸರ್ಕಾರಕ್ಕೆ ಸಲಹೆ ನೀಡಿದೆ. ಹೀಗಿರುವಾಗ ಆ ಸಲಹೆಯನ್ನು ಅದೇ ಆಯೋಗದ ಪುನರ್ಪರಿಶೀಲನೆಗೆ ಒಳಪಡಿಸುವ ಅಗತ್ಯವಿಲ್ಲ. ಏಕರೂಪ ಜಾತಿಗಳನ್ನು ವಿಭಜಿಸುವ ಕ್ರಮ ಸಂವಿಧಾನದ ವಿಧಿ 14ರ ಉಲ್ಲಂಘನೆ ಎಂದು ಸುಪ್ರೀಂಕೋರ್ಟ್ನ ಸಂವಿಧಾನಪೀಠವು 2004ರ (ಇ.ವಿ.ಚಿನ್ನಯ್ಯ–ಆಂಧ್ರಪ್ರದೇಶ ಪ್ರಕರಣ) ತೀರ್ಪಿನಲ್ಲಿ ಉಲ್ಲೇಖಿಸಿದೆ’ ಎಂದು ಜಾಗೃತ ವೇದಿಕೆ ಮನವರಿಕೆ ಮಾಡಿಕೊಟ್ಟಿತು.