‘ದಿನೇಶ್ ಮತ್ತಿತರರು ತಮ್ಮ ಫೇಸ್ಬುಕ್ನಲ್ಲಿ ‘ಬಿ.ಎಲ್.ಸಂತೋಷ್ ಮಾತನಾಡಿದ್ದಾರೆ ಎನ್ನಲಾದ ವರದಿಯನ್ನು ಪೋಸ್ಟ್ ಮಾಡಿ ‘ಇದು ನಿಜವೇ? ಅಲ್ಲವೇ? ಎಂದು ಸಂತೋಷ್ ಸ್ಪಷ್ಟೀಕರಣ ಕೊಡಲಿ’ ಎಂದು ಹೇಳಿದ್ದರು. ತಮಗಿರುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬಳಸಿಕೊಂಡು ಪ್ರಶ್ನೆ ಮಾಡಿದ್ದಾರೆ. ಅವರು ವರದಿಯ ಸಮರ್ಥನೆ ಮಾಡಿಲ್ಲ. ಇದು ನಿಜವೆಂದೂ ಪ್ರಚಾರ ಮಾಡಿಲ್ಲ’ ಎಂದು ಒಕ್ಕೂಟದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಒಕ್ಕೂಟದ ಎಲ್.ಎನ್. ಮುಕುಂದರಾಜ್, ಜಾಣಗೆರೆ ವೆಂಕಟರಾಮಯ್ಯ, ಕೆ.ಎಸ್.ವಿಮಲಾ, ವಸುಂಧರಾ ಭೂಪತಿ ಹೇಳಿದ್ದಾರೆ.