ವಿಚಾರಣೆ ವೇಳೆ ಪೊಲೀಸರ ನಿರ್ದೇಶನದಂತೆ ಕೋರ್ಟ್ಗೆ ಖುದ್ದು ಹಾಜರಾಗಿದ್ದ ಯಶವಂತಪುರ ಬಳಿಯ ಮುತ್ಯಾಲ ನಗರದ ನಿವಾಸಿ ಕೇಶವನ್ ನ್ಯಾಯಪೀಠಕ್ಕೆ ಲಿಖಿತ ಕ್ಷಮೆ ಯಾಚಿಸಿದರು. ನಂತರ ಮುಖ್ಯ ನ್ಯಾಯಮೂರ್ತಿಗಳು, ‘ನೀವು ಹೇಳುವುದನ್ನು ಕೋರ್ಟ್ನಲ್ಲಿ ಕಾನೂನು ಪ್ರಕ್ರಿಯೆ ಮೂಲಕವೇ ತಿಳಿಸಬೇಕು. ಅದು ಬಿಟ್ಟು ನ್ಯಾಯಾಲಯದ ವ್ಯಾಪ್ತಿ ಮೀರಿ ವರ್ತಿಸಿ ತೊಂದರೆ ಕೊಡಬಾರದು. ನಿಮ್ಮ ದೂರು–ದುಮ್ಮಾನ, ಸಲಹೆಗಳನ್ನು ಬಿಬಿಎಂಪಿಗೆ ಸಲ್ಲಿಸಿ’ ಎಂದು ಕಿವಿಮಾತು ಹೇಳಿದರು.