<p><strong>ಬೆಂಗಳೂರು:</strong> ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನನಿಲ್ದಾಣದ (ಕೆಐಎ) ಆವರಣದಲ್ಲಿ ವಿದೇಶಿ ಸಸ್ಯಗಳು ಪ್ರಯಾಣಿಕರನ್ನು ಸ್ವಾಗತಿಸಲಿವೆ. ಸ್ಪೇನ್ ಮತ್ತು ಇಟಲಿಯಿಂದ ಸಸ್ಯಗಳನ್ನು ತರಿಸಲಾಗಿದೆ.</p>.<p>ಅನನ್ಯವಾದ ಮತ್ತು ವಿನಾಶದ ಅಂಚಿನಲ್ಲಿರುವ ಗಿಡಗಳನ್ನು ಕೆಐಎ ಆವರಣದ ಸುತ್ತಲೂ ನೆಟ್ಟು ಪೋಷಿಸಲಾಗುತ್ತದೆ. ಈ ಪೈಕಿ, ಡ್ರ್ಯಾಗನ್ ಮತ್ತು ಕ್ಯುಪ್ರಸಿಸ್ ಸಸ್ಯಗಳನ್ನು ಆಮದು ಮಾಡಿಕೊಳ್ಳಲಾಗಿದೆ.</p>.<p>ಬೆಂಗಳೂರಿನ ತಾಪಮಾನದ ಆಧಾರದ ಮೇಲೆ ರೂಪಿಸಿದ್ದ ಕಂಟೈನರ್ಗಳಲ್ಲಿ ಈ ಗಿಡ–ಮರಗಳು 10 ವಾರಗಳ ಹಿಂದೆ ಯುರೋಪ್ನಿಂದ ಪ್ರಯಾಣ ಆರಂಭಿಸಿದ್ದವು. ಇವುಗಳನ್ನು 10 ವಾರ ಹಸಿರುಮನೆಯಲ್ಲಿ ಇರಿಸಿ ಸ್ಥಳೀಯ ಹವಾಮಾನ ಮತ್ತು ಮಣ್ಣಿನ ಸ್ಥಿತಿಗೆ ಹೊಂದಿಕೊಳ್ಳುವಂತೆ ಮಾಡಲಾಗುತ್ತದೆ. ವಿಶ್ವದ ಬೇರೆ–ಬೇರೆ ಕಡೆಗಳಿಂದ ಅಪರೂಪದ ಮತ್ತಷ್ಟು ಸಸ್ಯಗಳನ್ನು ತರಲು ಬಿಐಎಎಲ್ ಉದ್ದೇಶಿಸಿದೆ.</p>.<p>‘ದೇಶದ ಉದ್ಯಾನ ನಗರಿಯಾಗಿರುವ ಬೆಂಗಳೂರಿನ ವರ್ಚಸ್ಸನ್ನು ಉಳಿಸಿಕೊಳ್ಳುವುದರ ಜೊತೆಗೆ, ವಿಮಾನ ನಿಲ್ದಾಣದ ಮೂಲಕ ಸಾಗುವ ಪ್ರಯಾಣಿಕರಿಗೆ ನೈಸರ್ಗಿಕ ಸೌಂದರ್ಯ ಉಣಬಡಿಸುವುದು ನಮ್ಮ ಉದ್ದೇಶ’ ಎನ್ನುತ್ತಾರೆಬಿಐಎಎಲ್ನ ಲ್ಯಾಂಡ್ಸ್ಕೇಪಿಂಗ್ ಮುಖ್ಯಸ್ಥ ಪ್ರಸನ್ನಮೂರ್ತಿ ದೇಸಾಯಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನನಿಲ್ದಾಣದ (ಕೆಐಎ) ಆವರಣದಲ್ಲಿ ವಿದೇಶಿ ಸಸ್ಯಗಳು ಪ್ರಯಾಣಿಕರನ್ನು ಸ್ವಾಗತಿಸಲಿವೆ. ಸ್ಪೇನ್ ಮತ್ತು ಇಟಲಿಯಿಂದ ಸಸ್ಯಗಳನ್ನು ತರಿಸಲಾಗಿದೆ.</p>.<p>ಅನನ್ಯವಾದ ಮತ್ತು ವಿನಾಶದ ಅಂಚಿನಲ್ಲಿರುವ ಗಿಡಗಳನ್ನು ಕೆಐಎ ಆವರಣದ ಸುತ್ತಲೂ ನೆಟ್ಟು ಪೋಷಿಸಲಾಗುತ್ತದೆ. ಈ ಪೈಕಿ, ಡ್ರ್ಯಾಗನ್ ಮತ್ತು ಕ್ಯುಪ್ರಸಿಸ್ ಸಸ್ಯಗಳನ್ನು ಆಮದು ಮಾಡಿಕೊಳ್ಳಲಾಗಿದೆ.</p>.<p>ಬೆಂಗಳೂರಿನ ತಾಪಮಾನದ ಆಧಾರದ ಮೇಲೆ ರೂಪಿಸಿದ್ದ ಕಂಟೈನರ್ಗಳಲ್ಲಿ ಈ ಗಿಡ–ಮರಗಳು 10 ವಾರಗಳ ಹಿಂದೆ ಯುರೋಪ್ನಿಂದ ಪ್ರಯಾಣ ಆರಂಭಿಸಿದ್ದವು. ಇವುಗಳನ್ನು 10 ವಾರ ಹಸಿರುಮನೆಯಲ್ಲಿ ಇರಿಸಿ ಸ್ಥಳೀಯ ಹವಾಮಾನ ಮತ್ತು ಮಣ್ಣಿನ ಸ್ಥಿತಿಗೆ ಹೊಂದಿಕೊಳ್ಳುವಂತೆ ಮಾಡಲಾಗುತ್ತದೆ. ವಿಶ್ವದ ಬೇರೆ–ಬೇರೆ ಕಡೆಗಳಿಂದ ಅಪರೂಪದ ಮತ್ತಷ್ಟು ಸಸ್ಯಗಳನ್ನು ತರಲು ಬಿಐಎಎಲ್ ಉದ್ದೇಶಿಸಿದೆ.</p>.<p>‘ದೇಶದ ಉದ್ಯಾನ ನಗರಿಯಾಗಿರುವ ಬೆಂಗಳೂರಿನ ವರ್ಚಸ್ಸನ್ನು ಉಳಿಸಿಕೊಳ್ಳುವುದರ ಜೊತೆಗೆ, ವಿಮಾನ ನಿಲ್ದಾಣದ ಮೂಲಕ ಸಾಗುವ ಪ್ರಯಾಣಿಕರಿಗೆ ನೈಸರ್ಗಿಕ ಸೌಂದರ್ಯ ಉಣಬಡಿಸುವುದು ನಮ್ಮ ಉದ್ದೇಶ’ ಎನ್ನುತ್ತಾರೆಬಿಐಎಎಲ್ನ ಲ್ಯಾಂಡ್ಸ್ಕೇಪಿಂಗ್ ಮುಖ್ಯಸ್ಥ ಪ್ರಸನ್ನಮೂರ್ತಿ ದೇಸಾಯಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>