ಬೆಂಗಳೂರು ಉತ್ತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ರಾಜ್ಕುಮಾರ್ ಮಾತನಾಡಿ, ‘ನಾಡಪ್ರಭು ಕೆಂಪೇಗೌಡ ಅವರಲ್ಲಿ ದೂರದೃಷ್ಟಿ ಇತ್ತು. ಬೆಂಗಳೂರು ಕಟ್ಟುವ ಮೂಲಕ ಎಲ್ಲ ವರ್ಗ, ಜಾತಿ, ಭಾಷೆಯ ಜನರು ಉದ್ಯೋಗ ಕಂಡುಕೊಳ್ಳುವಂತೆ ಮಾಡಿದರು. ಪೇಟೆ, ಕೋಟೆ, ಕೆರೆ-ಕುಂಟೆ, ಕಲ್ಯಾಣಿ, ಗುಂಡು ತೋಪು, ಮನೆಗಳನ್ನು ಕಟ್ಟಿಕೊಟ್ಟಿದ್ದರು’ ಎಂದು ಸ್ಮರಿಸಿದರು.