<p>ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕಾರ್ಯಾರಂಭವಾದಾಗಿನಿಂದ ಇದೇ ಜೂನ್ ಕೊನೆಯವರೆಗೆ 25 ಕೋಟಿ ಜನರು ಪ್ರಯಾಣಿಸಿದ್ದು, ದಕ್ಷಿಣ ಭಾರತದ ಮಟ್ಟಿಗೆ ಇದೊಂದು ಅಪರೂಪದ ಮೈಲಿಗಲ್ಲು.</p>.<p>2008ರಲ್ಲಿ ಆರಂಭವಾದ ವಿಮಾನ ನಿಲ್ದಾಣ ಈವರೆಗೆ 20 ಲಕ್ಷ ವಾಯು ಸಂಚಾರಗಳನ್ನು ಕಂಡಿದೆ. ದಕ್ಷಿಣ ಭಾರತದಲ್ಲಿ ಈ ಮೈಲುಗಲ್ಲು ಮುಟ್ಟಿದ ಪ್ರಥಮ ಸಾರ್ವಜನಿಕ–ಖಾಸಗಿ ಸಹಭಾಗಿತ್ವದ ವಿಮಾನ ನಿಲ್ದಾಣ ಇದಾಗಿದೆ ಎಂದು ಪ್ರಕಟಣೆ ತಿಳಿಸಿದೆ.</p>.<p class="Briefhead">ಕಥಾಸಂಕಲನ, ಕಾದಂಬರಿ ಆಹ್ವಾನ</p>.<p>ಬೆಂಗಳೂರು: ಡಾ. ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಟ್ರಸ್ಟ್ ‘ಮಾಸ್ತಿ ಕಥಾ ಪುರಸ್ಕಾರ’ ಹಾಗೂ ‘ಮಾಸ್ತಿ ಕಾದಂಬರಿ ಪುರಸ್ಕಾರ’ಕ್ಕೆ ಕಥಾಸಂಕಲನ ಹಾಗೂ ಕಾದಂಬರಿಗಳನ್ನು ಆಹ್ವಾನಿಸಿದೆ.</p>.<p>ಮಾಸ್ತಿ ಅವರ 131ನೇ ವರ್ಷದ ಜನ್ಮದಿನದ ಸಂಸ್ಮರಣೆ ಪ್ರಯುಕ್ತ ಈ ಸ್ಪರ್ಧೆ ಹಮ್ಮಿಕೊಂಡಿದೆ. 2021ರ ಜ.1ರಿಂದ ಡಿ.31ರ ಅವಧಿಯಲ್ಲಿ ಪ್ರಕಟಗೊಂಡ ಕೃತಿಗಳನ್ನು ಮಾತ್ರ ಪರಿಗಣಿಸಲಾಗುತ್ತದೆ. ಪ್ರಶಸ್ತಿ ಪಡೆದ ಕಥಾ ಸಂಕಲನ ಹಾಗೂ ಕಾದಂಬರಿ ಪುರಸ್ಕೃತ ಲೇಖಕರಿಗೆ ತಲಾ ₹ 25 ಸಾವಿರ ನಗದು ಮತ್ತು ಪ್ರಕಾಶಕರಿಗೆ ₹ 10 ಸಾವಿರ ನಗದು, ಫಲಕ ನೀಡಲಾಗುತ್ತದೆ.</p>.<p>ಕೃತಿಯ ನಾಲ್ಕು ಪ್ರತಿಗಳನ್ನು ಜುಲೈ 31ರೊಳಗೆ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಟ್ರಸ್ಟ್, ನಂ.21, ಎಲ್ಲಪ್ಪ ಗಾರ್ಡನ್, 10ನೇ ಕ್ರಾಸ್, ಮಲ್ಲೇಶ್ವರ, ಬೆಂಗಳೂರು–560 003 ಈ ವಿಳಾಸಕ್ಕೆ ಕಳುಹಿಸಬೇಕು ಎಂದು ಟ್ರಸ್ಟ್ ಅಧ್ಯಕ್ಷ ಮಾವಿನಕೆರೆ ರಂಗನಾಥನ್ ತಿಳಿಸಿದ್ದಾರೆ. ಸಂಪರ್ಕ: 080–23363347</p>.<p class="Briefhead">ವೃದ್ಧೆಯ ಕೈಕಾಲು ಕಟ್ಟಿ ಚಿನ್ನಾಭರಣ ಕಳವು</p>.<p>ಬೆಂಗಳೂರು: ನಗರದ ಜೀವನ್ ಬಿಮಾ ನಗರದ ಎಲ್ಐಸಿ ಕಾಲೊನಿಯಲ್ಲಿ ಮನೆ ಕೆಲಸಕ್ಕಿದ್ದ ದಂಪತಿಯೇ ವೃದ್ಧೆಯ ಕೈಕಾಲು ಕಟ್ಟಿಹಾಕಿ ಚಿನ್ನಾಭರಣ ದೋಚಿ ಪರಾರಿಯಾಗಿದ್ಧಾರೆ.</p>.<p>ಕೇಂದ್ರೀಯ ವಿದ್ಯಾಲಯ ರಸ್ತೆಯ ನಿವಾಸಿ ಗಿರಿಯಪ್ಪ ಅವರ ಮನೆಯಲ್ಲಿದ್ದ ₹ 10 ಲಕ್ಷ, 100 ಗ್ರಾಂ ಚಿನ್ನಾಭರಣ ದೋಚಲಾಗಿದೆ. ಕೆಲಸಕ್ಕಿದ್ದ ಸಂಗೀತಾ ಮತ್ತು ಆಕೆಯ ಪತಿ ಪ್ರತಾಪ್ ಈ ಕೃತ್ಯ ಎಸಗಿದ್ದಾರೆ ಎಂದು ದೂರಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕಾರ್ಯಾರಂಭವಾದಾಗಿನಿಂದ ಇದೇ ಜೂನ್ ಕೊನೆಯವರೆಗೆ 25 ಕೋಟಿ ಜನರು ಪ್ರಯಾಣಿಸಿದ್ದು, ದಕ್ಷಿಣ ಭಾರತದ ಮಟ್ಟಿಗೆ ಇದೊಂದು ಅಪರೂಪದ ಮೈಲಿಗಲ್ಲು.</p>.<p>2008ರಲ್ಲಿ ಆರಂಭವಾದ ವಿಮಾನ ನಿಲ್ದಾಣ ಈವರೆಗೆ 20 ಲಕ್ಷ ವಾಯು ಸಂಚಾರಗಳನ್ನು ಕಂಡಿದೆ. ದಕ್ಷಿಣ ಭಾರತದಲ್ಲಿ ಈ ಮೈಲುಗಲ್ಲು ಮುಟ್ಟಿದ ಪ್ರಥಮ ಸಾರ್ವಜನಿಕ–ಖಾಸಗಿ ಸಹಭಾಗಿತ್ವದ ವಿಮಾನ ನಿಲ್ದಾಣ ಇದಾಗಿದೆ ಎಂದು ಪ್ರಕಟಣೆ ತಿಳಿಸಿದೆ.</p>.<p class="Briefhead">ಕಥಾಸಂಕಲನ, ಕಾದಂಬರಿ ಆಹ್ವಾನ</p>.<p>ಬೆಂಗಳೂರು: ಡಾ. ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಟ್ರಸ್ಟ್ ‘ಮಾಸ್ತಿ ಕಥಾ ಪುರಸ್ಕಾರ’ ಹಾಗೂ ‘ಮಾಸ್ತಿ ಕಾದಂಬರಿ ಪುರಸ್ಕಾರ’ಕ್ಕೆ ಕಥಾಸಂಕಲನ ಹಾಗೂ ಕಾದಂಬರಿಗಳನ್ನು ಆಹ್ವಾನಿಸಿದೆ.</p>.<p>ಮಾಸ್ತಿ ಅವರ 131ನೇ ವರ್ಷದ ಜನ್ಮದಿನದ ಸಂಸ್ಮರಣೆ ಪ್ರಯುಕ್ತ ಈ ಸ್ಪರ್ಧೆ ಹಮ್ಮಿಕೊಂಡಿದೆ. 2021ರ ಜ.1ರಿಂದ ಡಿ.31ರ ಅವಧಿಯಲ್ಲಿ ಪ್ರಕಟಗೊಂಡ ಕೃತಿಗಳನ್ನು ಮಾತ್ರ ಪರಿಗಣಿಸಲಾಗುತ್ತದೆ. ಪ್ರಶಸ್ತಿ ಪಡೆದ ಕಥಾ ಸಂಕಲನ ಹಾಗೂ ಕಾದಂಬರಿ ಪುರಸ್ಕೃತ ಲೇಖಕರಿಗೆ ತಲಾ ₹ 25 ಸಾವಿರ ನಗದು ಮತ್ತು ಪ್ರಕಾಶಕರಿಗೆ ₹ 10 ಸಾವಿರ ನಗದು, ಫಲಕ ನೀಡಲಾಗುತ್ತದೆ.</p>.<p>ಕೃತಿಯ ನಾಲ್ಕು ಪ್ರತಿಗಳನ್ನು ಜುಲೈ 31ರೊಳಗೆ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಟ್ರಸ್ಟ್, ನಂ.21, ಎಲ್ಲಪ್ಪ ಗಾರ್ಡನ್, 10ನೇ ಕ್ರಾಸ್, ಮಲ್ಲೇಶ್ವರ, ಬೆಂಗಳೂರು–560 003 ಈ ವಿಳಾಸಕ್ಕೆ ಕಳುಹಿಸಬೇಕು ಎಂದು ಟ್ರಸ್ಟ್ ಅಧ್ಯಕ್ಷ ಮಾವಿನಕೆರೆ ರಂಗನಾಥನ್ ತಿಳಿಸಿದ್ದಾರೆ. ಸಂಪರ್ಕ: 080–23363347</p>.<p class="Briefhead">ವೃದ್ಧೆಯ ಕೈಕಾಲು ಕಟ್ಟಿ ಚಿನ್ನಾಭರಣ ಕಳವು</p>.<p>ಬೆಂಗಳೂರು: ನಗರದ ಜೀವನ್ ಬಿಮಾ ನಗರದ ಎಲ್ಐಸಿ ಕಾಲೊನಿಯಲ್ಲಿ ಮನೆ ಕೆಲಸಕ್ಕಿದ್ದ ದಂಪತಿಯೇ ವೃದ್ಧೆಯ ಕೈಕಾಲು ಕಟ್ಟಿಹಾಕಿ ಚಿನ್ನಾಭರಣ ದೋಚಿ ಪರಾರಿಯಾಗಿದ್ಧಾರೆ.</p>.<p>ಕೇಂದ್ರೀಯ ವಿದ್ಯಾಲಯ ರಸ್ತೆಯ ನಿವಾಸಿ ಗಿರಿಯಪ್ಪ ಅವರ ಮನೆಯಲ್ಲಿದ್ದ ₹ 10 ಲಕ್ಷ, 100 ಗ್ರಾಂ ಚಿನ್ನಾಭರಣ ದೋಚಲಾಗಿದೆ. ಕೆಲಸಕ್ಕಿದ್ದ ಸಂಗೀತಾ ಮತ್ತು ಆಕೆಯ ಪತಿ ಪ್ರತಾಪ್ ಈ ಕೃತ್ಯ ಎಸಗಿದ್ದಾರೆ ಎಂದು ದೂರಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>