ಆತ ತನ್ನ ಸಹಚರರ ಜೊತೆ ಸೇರಿ ಬನ್ಸಾಲ್ ಅವರನ್ನು ಏಪ್ರಿಲ್ 14ರಂದು ಬನ್ನೇರುಘಟ್ಟ ರಸ್ತೆಯ ಬಳಿ ಕಾರು ಸಮೇತ ಅಪಹರಿಸಿದ್ದ. ತಾವರೆಕೆರೆಗೆ ಕರೆದೊಯ್ದು, ಪಿಸ್ತೂಲ್ ತೋರಿಸಿ ₹20 ಲಕ್ಷ ನೀಡುವಂತೆ ಚಿತ್ರಹಿಂಸೆ ನೀಡಿದ್ದ. ಭಯ ಬೀಳಿಸುವುದಕ್ಕಾಗಿ ಗಾಳಿಯಲ್ಲಿ ಒಂದು ಸುತ್ತು ಗುಂಡು ಸಹ ಹಾರಿಸಿದ್ದ.ಹಣವಿಲ್ಲವೆಂದು ಬನ್ಸಾಲ್ ಹೇಳಿದ್ದರು. ನಂತರ ದುಷ್ಕರ್ಮಿಗಳು, ಉದ್ಯಮಿ ಬಳಿಯ ₹10 ಸಾವಿರ ಹಾಗೂ ಮೊಬೈಲ್ ಕಿತ್ತುಕೊಂಡು ಮಾಗಡಿ ರಸ್ತೆಯಲ್ಲಿ ಬಿಟ್ಟು ಹೋಗಿದ್ದರು. ಬಳಿಕ ಉದ್ಯಮಿ, ಬ್ಯಾಟರಾಯಪುರ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಾದ ಬಳಿಕವೂ ಆರೋಪಿಗಳನ್ನು ಬಂಧಿಸಿರಲಿಲ್ಲ. ಅದೇ ಕಾರಣಕ್ಕೆ ಕರ್ತವ್ಯಲೋಪ ಆರೋಪದಡಿ ಬ್ಯಾಟರಾಯಪುರ ಠಾಣೆ ಇನ್ಸ್ಪೆಕ್ಟರ್ ಶಿವಸ್ವಾಮಿ ಹಾಗೂ ಪಿಎಸ್ಐ ವೆಂಕಟೇಶ್ ಅವರನ್ನು ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್ಕುಮಾರ್ ಅಮಾನತು ಮಾಡಿದ್ದರು.ನಂತರವೇ ಎಸಿಪಿ ನೇತೃತ್ವದ ತಂಡವು ಆರೋಪಿಗಳನ್ನು ಬಂಧಿಸಿತ್ತು.