‘ಉದ್ಯಮಿ ಭರತ್ ಶೆಟ್ಟಿ ಎಂಬುವರ ವಿರುದ್ಧ ಉದ್ದೇಶಪೂರ್ವಕವಾಗಿ ವಂಚನೆ ಹಾಗೂ ಹಲ್ಲೆ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಇದರಲ್ಲಿ ಭರತ್ ಶೆಟ್ಟಿ ನಿರಾಪರಾಧಿ ಎಂದು ಹೇಳಿ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಲು ಎಎಸ್ಐ ದಯಾನಂದಸ್ವಾಮಿ ₹ 5 ಲಕ್ಷ ಲಂಚ ಪಡೆದಿದ್ದರು ಎನ್ನಲಾಗಿದೆ. ಲಂಚ ಪಡೆದ ನಂತರವೂ ಎಎಸ್ಐ, ಬಿ ರಿಪೋರ್ಟ್ ಸಲ್ಲಿಸಿಲ್ಲ. ಹಣಕ್ಕಾಗಿ ಪುನಃ ಪೀಡಿಸುತ್ತಿದ್ದರು. ಬೇಸತ್ತ ಉದ್ಯಮಿ, ಠಾಣೆ ಇನ್ಸ್ಪೆಕ್ಟರ್ ಹಾಗೂ ಎಸಿಬಿ ಅಧಿಕಾರಿಗಳಿಗೆ ಇತ್ತೀಚೆಗೆ ದೂರು ನೀಡಿದ್ದರು’ ಎಂದು ಮೂಲಗಳು ಹೇಳಿವೆ.