ಬೆಂಗಳೂರು: ಒಂದೇ ಸೂರಿನಡಿ ಹೋಮಿಯೋಪಥಿ, ನ್ಯಾಚುರೋಪಥಿ ಹಾಗೂ ಆಯುರ್ವೇದ ಚಿಕಿತ್ಸೆ ಒದಗಿಸಲು ರಾಜಾಜಿನಗರದ 1ನೇ ಹಂತದಲ್ಲಿ ಆರಂಭಿಸಿರುವ ಕ್ಷೇಮ ಆರೋಗ್ಯಧಾಮಕ್ಕೆ ಅಬಕಾರಿ ಸಚಿವ ಕೆ.ಗೋಪಾಲಯ್ಯ ಭಾನುವಾರ ಚಾಲನೆ ನೀಡಿದರು.
‘ಪ್ರತಿಯೊಬ್ಬರು ಆರೋಗ್ಯಯುತ ಜೀವನ ನಡೆಸಲು ಒತ್ತು ನೀಡಬೇಕು. ಗುಣಮಟ್ಟದ ಚಿಕಿತ್ಸೆ ಒದಗಿಸಲು ಆರೋಗ್ಯಧಾಮ ಆರಂಭಿಸಲಾಗಿದೆ. ಎಲ್ಲಾ ವಯೋಮಾನದ ರೋಗಿಗಳಿಗೂ ಇದರಿಂದ ಅನುಕೂಲವಾಗಲಿದೆ’ ಎಂದು ಗೋಪಾಲಯ್ಯ ತಿಳಿಸಿದರು.
ಚಿತ್ರ ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ‘ವಸಂತ್ ಗೌಡ ಅವರು ಜನರಿಗೆ ಕೈಗೆಟಕುವ ದರದಲ್ಲಿ ಚಿಕಿತ್ಸೆ ಒದಗಿಸುವ ಗುರಿಯೊಂದಿಗೆ ಆರೋಗ್ಯ ಧಾಮ ಆರಂಭಿಸಿದ್ದಾರೆ’ ಎಂದರು.