ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ, ‘ಕಾಶ್ಮೀರ, ಹಿಮಾಚಲ ಪ್ರದೇಶ, ಮಹಾರಾಷ್ಟ್ರ ಸೇರಿದಂತೆ ದೇಶದಹಲವು ರಾಜ್ಯಗಳಲ್ಲಿ ಕುರುಬರನ್ನು ಎಸ್ಟಿಗೆ ಸೇರಿಸಲಾಗಿದೆ. ರಾಜ್ಯದಲ್ಲಿನ ಕುರುಬರನ್ನು ಈ ಪಂಗಡಕ್ಕೆ ಸೇರಿಸಲು ಹೋರಾಟ ನಡೆಸಲಾಗುವುದು. ನಾವೆಲ್ಲರೂ (ನಾಯಕರು) ಒಗ್ಗೂಡಿ ಇರುತ್ತೇವೆ. ಸಮುದಾಯದ ನಾಯಕರ ಒಗ್ಗಟ್ಟಿಗೆ ಸಂಬಂಧಿಸಿ ಯಾರೂ ಸಂಶಯ ಪಡುವುದು ಬೇಡ’ ಎಂದರು.