ಹಿರಿಯ ಸಂಶೋಧಕ ಡಾ.ಆರ್.ಶಿವಣ್ಣ ಅವರಿಗೆ ಜಿ.ಎಸ್.ಶಿವರುದ್ರಪ್ಪ ಪ್ರಶಸ್ತಿ, ವೈದ್ಯ ಸಿ.ಎಸ್. ಹನುಮಂತಪ್ಪ ಅವರಿಗೆ ಡಾ.ಎಚ್.ನರಸಿಂಹಯ್ಯ ಪ್ರಶಸ್ತಿ, ಡಾ.ಮಮತಾ.ಜಿ. ಸಾಗರ್ ಅವರಿಗೆ ಸಂಚಿ ಹೊನ್ನಮ್ಮ ಕಾವ್ಯ ಪ್ರಶಸ್ತಿ, ಡಾ.ಶಿವರಾಜ್ ಬ್ಯಾಡರಹಳ್ಳಿ ಅವರಿಗೆ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಪ್ರಶಸ್ತಿ, ಪ್ರೊ.ನಾರಾಯಣಘಟ್ಟ ಅವರಿಗೆ ವಿ.ಕೃ.ಗೋಕಾಕ್ ಪ್ರಶಸ್ತಿ, ಡಾ.ಶ್ರೀಪಾದ ಹೆಗಡೆ ಅವರಿಗೆ ಶಿವರಾಮ ಕಾರಂತ ಪ್ರಶಸ್ತಿ, ಕವಿಗಳಾದ ಮುದಲ್ ವಿಜಯ್, ಪ್ರೊ. ತಮ್ಮಣ್ಣಗೌಡ, ಬಸವಾನಂದ ಪ್ರಕಾಶ್, ಗೋಪಾಲಕೃಷ್ಣ ಹೆಗಡೆ, ಎಂ.ಎನ್.ಲಕ್ಷ್ಮಿದೇವಮ್ಮ, ವಿದುಷಿ ಬೃಂದಾಮದುಸೂಧನ್, ಡಾ.ಪೂರ್ಣಿಮಾದೇವಿ, ಡಾ.ಆನಂದತೀರ್ಥ.ಬಿ.ಗುಂಡಿ, ಡಾ.ಸುನೀತಾ ವಿಶ್ವಕರ್ಮ, ಡಾ.ಎ.ಎಂ.ಶಿವಕುಮಾರ್, ವೀಣಾ ಶೇಷಾದ್ರಿ ಅವರಿಗೆ ರಾಜ್ಯಮಟ್ಟದ ರಾಜರಾಜೇಶ್ವರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.