<p>ಬೆಂಗಳೂರು: ‘ಕುವೆಂಪು ಅವರ ಸಮಗ್ರ ಸಾಹಿತ್ಯವನ್ನು ಇಂದಿನ ಯುವ ಜನಾಂಗ ಓದಬೇಕು. ಅವರು ಸಾಹಿತ್ಯದ ಮೂಲಕ ಸಾರಿದ ಜೀವನ ಮೌಲ್ಯಗಳನ್ನು ಅನುಸರಿಸಬೇಕು’ ಎಂದು ಲೇಖಕ ವೈ. ಬಿ.ಎಚ್. ಜಯದೇವ್ ಹೇಳಿದರು.</p>.<p>ಕುವೆಂಪು ಜನ್ಮದಿನದ ಅಂಗವಾಗಿ ಮಲ್ಲಸಂದ್ರದ ರುದ್ರಭೂಮಿಯಲ್ಲಿ ಕನ್ನಡ ಕ್ರಿಯಾ ಸಮಿತಿ ಆಯೋಜಿಸಿದ್ದ ಸ್ಮಶಾನ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.</p>.<p>ಕವಿಗೋಷ್ಠಿ ಉದ್ಘಾಟಿಸಿದ ಲೇಖಕ ಗುರುರಾಜ್ ಎಸ್ .ದಾವಣಗೆರೆ, ‘ಕುವೆಂಪು ಅವರು ಸ್ವಾತಂತ್ರ್ಯ ಪೂರ್ವ ದಲ್ಲೇ ತಮ್ಮ ಕೃತಿಗಳ ಮೂಲಕ ವೈಚಾ ರಿಕ ಪ್ರಜ್ಞೆಯನ್ನು ಬಿತ್ತಿದ್ದರು. ವಿಶ್ವಮಾ ನವ ಸಂದೇಶ ಸಾರಿದ್ದರು’ ಎಂದರು.</p>.<p>ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ಕೆ.ಜಿ. ಕುಮಾರ್, ‘ಕುವೆಂಪು ಅವರ ಕೃತಿಗಳಲ್ಲಿ ಮಾನವೀಯತೆ, ಸಾಮಾಜಿಕ ಕಳಕಳಿ, ಪ್ರೀತಿ, ಕರುಣೆ, ಬಂಡಾಯ, ವೈಚಾರಿಕತೆ ಈ ಎಲ್ಲವನ್ನೂ ಕಾಣಬಹುದು’ಎಂದರು.</p>.<p>ಮಮತಾ ವಾರನಹಳ್ಳಿ, ಡಾ. ರಂಗನಾಥ್, ಕೆ.ಎಂ ರೇವಣ್ಣ, ಶಾಂತಕುಮಾರ್, ಚನ್ನಕೇಶವ ಲಾಳನಕಟ್ಟೆ, ಭಾರತಿ ಕೋಕಲೆ, ಡಾ.ಮಂಜುನಾಥ್, ಚಿತ್ತಣ್ಣ ದ್ವಾರನಕುಂಟೆ ಸೇರಿ 30ಕ್ಕೂ ಹೆಚ್ಚು ಕವಿಗಳು ಕವಿಗೋಷ್ಠಿಯಲ್ಲಿ ಭಾಗವಹಿಸಿದರು. </p>.<p>ಜಯಕರ್ನಾಟಕ ಸಂಘಟನೆ ಅಧ್ಯಕ್ಷ ಬಿ.ಎನ್.ಜಗದೀಶ್, ಕಾದಂಬರಿಕಾರ ಕಂನಾಡಿಗಾ ನಾರಾಯಣ, ಲಕ್ಷ್ಮೀ ಶ್ರೀನಿವಾಸ್ ಉಪಸ್ಥಿತರಿದ್ದರು. ಗಾಯಕ ರಾದ ಕೃಷ್ಣಮೂರ್ತಿ, ಈ. ಬಸವರಾಜ್ ಕುವೆಂಪು ರಚನೆಯ ಗೀತೆಗಳನ್ನು ಹಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ‘ಕುವೆಂಪು ಅವರ ಸಮಗ್ರ ಸಾಹಿತ್ಯವನ್ನು ಇಂದಿನ ಯುವ ಜನಾಂಗ ಓದಬೇಕು. ಅವರು ಸಾಹಿತ್ಯದ ಮೂಲಕ ಸಾರಿದ ಜೀವನ ಮೌಲ್ಯಗಳನ್ನು ಅನುಸರಿಸಬೇಕು’ ಎಂದು ಲೇಖಕ ವೈ. ಬಿ.ಎಚ್. ಜಯದೇವ್ ಹೇಳಿದರು.</p>.<p>ಕುವೆಂಪು ಜನ್ಮದಿನದ ಅಂಗವಾಗಿ ಮಲ್ಲಸಂದ್ರದ ರುದ್ರಭೂಮಿಯಲ್ಲಿ ಕನ್ನಡ ಕ್ರಿಯಾ ಸಮಿತಿ ಆಯೋಜಿಸಿದ್ದ ಸ್ಮಶಾನ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.</p>.<p>ಕವಿಗೋಷ್ಠಿ ಉದ್ಘಾಟಿಸಿದ ಲೇಖಕ ಗುರುರಾಜ್ ಎಸ್ .ದಾವಣಗೆರೆ, ‘ಕುವೆಂಪು ಅವರು ಸ್ವಾತಂತ್ರ್ಯ ಪೂರ್ವ ದಲ್ಲೇ ತಮ್ಮ ಕೃತಿಗಳ ಮೂಲಕ ವೈಚಾ ರಿಕ ಪ್ರಜ್ಞೆಯನ್ನು ಬಿತ್ತಿದ್ದರು. ವಿಶ್ವಮಾ ನವ ಸಂದೇಶ ಸಾರಿದ್ದರು’ ಎಂದರು.</p>.<p>ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ಕೆ.ಜಿ. ಕುಮಾರ್, ‘ಕುವೆಂಪು ಅವರ ಕೃತಿಗಳಲ್ಲಿ ಮಾನವೀಯತೆ, ಸಾಮಾಜಿಕ ಕಳಕಳಿ, ಪ್ರೀತಿ, ಕರುಣೆ, ಬಂಡಾಯ, ವೈಚಾರಿಕತೆ ಈ ಎಲ್ಲವನ್ನೂ ಕಾಣಬಹುದು’ಎಂದರು.</p>.<p>ಮಮತಾ ವಾರನಹಳ್ಳಿ, ಡಾ. ರಂಗನಾಥ್, ಕೆ.ಎಂ ರೇವಣ್ಣ, ಶಾಂತಕುಮಾರ್, ಚನ್ನಕೇಶವ ಲಾಳನಕಟ್ಟೆ, ಭಾರತಿ ಕೋಕಲೆ, ಡಾ.ಮಂಜುನಾಥ್, ಚಿತ್ತಣ್ಣ ದ್ವಾರನಕುಂಟೆ ಸೇರಿ 30ಕ್ಕೂ ಹೆಚ್ಚು ಕವಿಗಳು ಕವಿಗೋಷ್ಠಿಯಲ್ಲಿ ಭಾಗವಹಿಸಿದರು. </p>.<p>ಜಯಕರ್ನಾಟಕ ಸಂಘಟನೆ ಅಧ್ಯಕ್ಷ ಬಿ.ಎನ್.ಜಗದೀಶ್, ಕಾದಂಬರಿಕಾರ ಕಂನಾಡಿಗಾ ನಾರಾಯಣ, ಲಕ್ಷ್ಮೀ ಶ್ರೀನಿವಾಸ್ ಉಪಸ್ಥಿತರಿದ್ದರು. ಗಾಯಕ ರಾದ ಕೃಷ್ಣಮೂರ್ತಿ, ಈ. ಬಸವರಾಜ್ ಕುವೆಂಪು ರಚನೆಯ ಗೀತೆಗಳನ್ನು ಹಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>