<p><strong>ಬೆಂಗಳೂರು</strong>: ನಾಗರಬಾವಿ ಬಳಿ ಶೆಡ್ಗಳಲ್ಲಿ ವಾಸವಿರುವ ವಲಸೆ ಕಾರ್ಮಿಕರ ಮಕ್ಕಳು ಸ್ವಾತಂತ್ರ್ಯೋತ್ಸವನ್ನು ಸಂಭ್ರಮದಿಂದ ಶನಿವಾರ ಆಚರಿಸಿದರು.</p>.<p>ಉತ್ತರ ಕರ್ನಾಟಕದ ಯಾದಗಿರಿ, ರಾಯಚೂರು, ಕೊಪ್ಪಳ ಸೇರಿದಂತೆ ಹಲವು ಜಿಲ್ಲೆಗಳಿಂದ ವಲಸೆ ಬಂದಿರುವ ಕಾರ್ಮಿಕರು, ಕಟ್ಟಡ ನಿರ್ಮಾಣ ಹಾಗೂ ಇತರೆ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಶೆಡ್ಗಳಲ್ಲಿ ಕುಟುಂಬ ಸಮೇತ ವಾಸವಾಗಿದ್ದಾರೆ.</p>.<p>ಇಂಥ ಕಾರ್ಮಿಕರ ಮಕ್ಕಳಿಗೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಶಾಂತಪ್ಪ ಜಡೆಮ್ಮನವರ್ ನಿತ್ಯವೂ ಶಿಕ್ಷಕರಾಗಿ ಪಾಠ ಮಾಡುತ್ತಿದ್ದಾರೆ. ಅದೇ ಮಕ್ಕಳು, ಸ್ವಾತಂತ್ರ್ಯೋತ್ಸವನ್ನು ಶಿಸ್ತಿನಿಂದ ಅರ್ಥಪೂರ್ಣವಾಗಿ ಆಚರಿಸಿದರು.</p>.<p>ಶೆಡ್ಗಳ ಬಳಿಯೇ ಧ್ವಜದ ಕಂಬ ನಿರ್ಮಿಸಿದ್ದ ಮಕ್ಕಳು, ರಂಗೋಲಿ ಹಾಕಿ ಅಂಗಳವನ್ನು ಅಲಂಕರಿಸಿದ್ದರು. ಶಿಸ್ತಿನಿಂದ ಸಾಲುಗಟ್ಟಿ ನಿಂತು ರಾಷ್ಟ್ರ ಜಾಗೃತಿ ಗೀತೆಗಳನ್ನು ಹಾಡಿದರು. ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್ ಧ್ವಜಾರೋಹಣ ನೆರವೇರಿಸಿ ಮಕ್ಕಳ ಜೊತೆ ಕಾಲ ಕಳೆದರು.</p>.<p>ಧ್ವಜಾರೋಹಣದ ಬಳಿಕ ಮಕ್ಕಳೆಲ್ಲರೂ ಸಾಮೂಹಿಕ ಭೋಜನ ಸವಿದರು. ಮಕ್ಕಳ ಶಿಕ್ಷಣಕ್ಕೆ ಅಗತ್ಯವಿದ್ದ ಪ್ರೊಜೆಕ್ಟರ್ನ್ನು ಚಂದ್ರಶೇಖರ್ ಅವರು ಕೊಡುಗೆಯಾಗಿ ವಿತರಿಸಿದರು.</p>.<p>ಜಿ.ಸಿ. ಚಂದ್ರಶೇಖರ್, ‘ಶಾಲೆಯಿಂದ ದೂರವುಳಿದಿದ್ದ ಕಾರ್ಮಿಕರ ಮಕ್ಕಳಿಗೆ ಪಾಠ ಮಾಡುತ್ತಿರುವ ಪಿಎಸ್ಐ ಶಾಂತಪ್ಪ ಕೆಲಸ ಶ್ಲಾಘನೀಯ. ಈ ಮಕ್ಕಳು ಶೈಕ್ಷಣಿಕವಾಗಿ ಚುರುಕಾಗಿದ್ದು, ಮುಂದೊಂದು ದಿನ ದೇಶದ ಹೆಮ್ಮೆಯ ಆಸ್ತಿ ಆಗುತ್ತಾರೆ’ ಎಂದು ಚಂದ್ರಶೇಖರ್ ಹೇಳಿದರು.</p>.<p>ಪಿಎಸ್ಐ ಶಾಂತಪ್ಪ, ‘ವಲಸೆ ಕಾರ್ಮಿಕರ ಮುಗ್ಧ ಮಕ್ಕಳ ಮುಖದಲ್ಲಿರುವ ನಗು ಖುಷಿ ಕೊಡುತ್ತದೆ. ಅವರ ಸಮ್ಮುಖದಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಿದ ಈ ದಿನವನ್ನೂ ಎಂದಿಗೂ ಮರೆಯುವುದಿಲ್ಲ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ನಾಗರಬಾವಿ ಬಳಿ ಶೆಡ್ಗಳಲ್ಲಿ ವಾಸವಿರುವ ವಲಸೆ ಕಾರ್ಮಿಕರ ಮಕ್ಕಳು ಸ್ವಾತಂತ್ರ್ಯೋತ್ಸವನ್ನು ಸಂಭ್ರಮದಿಂದ ಶನಿವಾರ ಆಚರಿಸಿದರು.</p>.<p>ಉತ್ತರ ಕರ್ನಾಟಕದ ಯಾದಗಿರಿ, ರಾಯಚೂರು, ಕೊಪ್ಪಳ ಸೇರಿದಂತೆ ಹಲವು ಜಿಲ್ಲೆಗಳಿಂದ ವಲಸೆ ಬಂದಿರುವ ಕಾರ್ಮಿಕರು, ಕಟ್ಟಡ ನಿರ್ಮಾಣ ಹಾಗೂ ಇತರೆ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಶೆಡ್ಗಳಲ್ಲಿ ಕುಟುಂಬ ಸಮೇತ ವಾಸವಾಗಿದ್ದಾರೆ.</p>.<p>ಇಂಥ ಕಾರ್ಮಿಕರ ಮಕ್ಕಳಿಗೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಶಾಂತಪ್ಪ ಜಡೆಮ್ಮನವರ್ ನಿತ್ಯವೂ ಶಿಕ್ಷಕರಾಗಿ ಪಾಠ ಮಾಡುತ್ತಿದ್ದಾರೆ. ಅದೇ ಮಕ್ಕಳು, ಸ್ವಾತಂತ್ರ್ಯೋತ್ಸವನ್ನು ಶಿಸ್ತಿನಿಂದ ಅರ್ಥಪೂರ್ಣವಾಗಿ ಆಚರಿಸಿದರು.</p>.<p>ಶೆಡ್ಗಳ ಬಳಿಯೇ ಧ್ವಜದ ಕಂಬ ನಿರ್ಮಿಸಿದ್ದ ಮಕ್ಕಳು, ರಂಗೋಲಿ ಹಾಕಿ ಅಂಗಳವನ್ನು ಅಲಂಕರಿಸಿದ್ದರು. ಶಿಸ್ತಿನಿಂದ ಸಾಲುಗಟ್ಟಿ ನಿಂತು ರಾಷ್ಟ್ರ ಜಾಗೃತಿ ಗೀತೆಗಳನ್ನು ಹಾಡಿದರು. ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್ ಧ್ವಜಾರೋಹಣ ನೆರವೇರಿಸಿ ಮಕ್ಕಳ ಜೊತೆ ಕಾಲ ಕಳೆದರು.</p>.<p>ಧ್ವಜಾರೋಹಣದ ಬಳಿಕ ಮಕ್ಕಳೆಲ್ಲರೂ ಸಾಮೂಹಿಕ ಭೋಜನ ಸವಿದರು. ಮಕ್ಕಳ ಶಿಕ್ಷಣಕ್ಕೆ ಅಗತ್ಯವಿದ್ದ ಪ್ರೊಜೆಕ್ಟರ್ನ್ನು ಚಂದ್ರಶೇಖರ್ ಅವರು ಕೊಡುಗೆಯಾಗಿ ವಿತರಿಸಿದರು.</p>.<p>ಜಿ.ಸಿ. ಚಂದ್ರಶೇಖರ್, ‘ಶಾಲೆಯಿಂದ ದೂರವುಳಿದಿದ್ದ ಕಾರ್ಮಿಕರ ಮಕ್ಕಳಿಗೆ ಪಾಠ ಮಾಡುತ್ತಿರುವ ಪಿಎಸ್ಐ ಶಾಂತಪ್ಪ ಕೆಲಸ ಶ್ಲಾಘನೀಯ. ಈ ಮಕ್ಕಳು ಶೈಕ್ಷಣಿಕವಾಗಿ ಚುರುಕಾಗಿದ್ದು, ಮುಂದೊಂದು ದಿನ ದೇಶದ ಹೆಮ್ಮೆಯ ಆಸ್ತಿ ಆಗುತ್ತಾರೆ’ ಎಂದು ಚಂದ್ರಶೇಖರ್ ಹೇಳಿದರು.</p>.<p>ಪಿಎಸ್ಐ ಶಾಂತಪ್ಪ, ‘ವಲಸೆ ಕಾರ್ಮಿಕರ ಮುಗ್ಧ ಮಕ್ಕಳ ಮುಖದಲ್ಲಿರುವ ನಗು ಖುಷಿ ಕೊಡುತ್ತದೆ. ಅವರ ಸಮ್ಮುಖದಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಿದ ಈ ದಿನವನ್ನೂ ಎಂದಿಗೂ ಮರೆಯುವುದಿಲ್ಲ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>