‘ಬಮುಲ್ ವ್ಯಾಪ್ತಿಯಲ್ಲಿ ಕಳೆದ ಬೇಸಿಗೆಯಲ್ಲಿ ಪ್ರತಿದಿನ 15 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿತ್ತು. →ಆದರೆ, ಈ ವರ್ಷ 13 ಲಕ್ಷ ಲೀಟರ್ ಉತ್ಪಾದನೆಯಾಗುತ್ತಿದೆ. ಸರ್ಕಾರ ಹಾಲಿಗೆ ಹೆಚ್ಚಿನ ದರ ನೀಡದ ಕಾರಣ ರೈತರು ಹೈನುಗಾರಿಕೆಯಿಂದ ದೂರ ಸರಿಯುತ್ತಿದ್ದಾರೆ. ಹಾಲಿನ ಉತ್ಪಾದನೆ ಕುಸಿತದಿಂದ ತುಪ್ಪದ ಉತ್ಪಾದನೆಯಲ್ಲಿ 10 ಪಟ್ಟು ಕಡಿಮೆಯಾಗಿದೆ’ ಎಂದು ಬಮುಲ್ ಅಧ್ಯಕ್ಷ ನರಸಿಂಹಮೂರ್ತಿ ತಿಳಿಸಿದ್ದಾರೆ.