ಬೆಂಗಳೂರು: ಮಾರಸಂದ್ರದ ಪಿಕೆಬಿ ಪದವಿ ಪೂರ್ವ ಕಾಲೇಜಿನ ಎನ್ಎಸ್ಎಸ್ ವಿದ್ಯಾರ್ಥಿಗಳು ಹೆಸರಘಟ್ಟ ಗ್ರಾಮದ ಕೆರೆಯ ದಡದಲ್ಲಿ ಬೆಳೆದಿದ್ದ ಗಿಡಗಳು ಮತ್ತು ಕುರುಚಲು ಸಸಿಗಳನ್ನು ಕಿತ್ತು ಸ್ವಚ್ಛಗೊಳಿಸಿದರು. ಕೆರೆಯ ಆಸುಪಾಸಿನಲ್ಲಿ ಬಿಸಾಕಿ ಹೋಗಿದ್ದ ಪ್ಲಾಸ್ಟಿಕ್ ಲೋಟಗಳು, ಮದ್ಯದ ಬಾಟಲಿಗಳನ್ನು ಎತ್ತಿ ಹಾಕಿದರು.