ಹಿರಿಯ ಸಾಹಿತಿ ಡಾ.ಎಚ್.ಎಸ್. ವೆಂಕಟೇಶಮೂರ್ತಿ, ‘ಕೆ.ಎಸ್. ನರಸಿಂಹಸ್ವಾಮಿಯವರಂತೆಯೇ ಲಕ್ಷ್ಮಣರಾವ್ ಅವರು ಪ್ರೇಮಕವಿತೆಗಳನ್ನೇ ಹೆಚ್ಚಾಗಿ ಬರೆದಿದ್ದಾರೆ. ನರಸಿಂಹಸ್ವಾಮಿಯವರದು ಮರ್ಯಾದೆ ದಾಟದ ಪ್ರೀತಿಯಾದರೆ, ಲಕ್ಷ್ಮಣರಾವ್ ಅವರದು ಅಪಥ್ಯ ಪ್ರೀತಿ. ಅಂದರೆ ಪಥ್ಯವನ್ನು ಮೀರಿ ಕವಿತೆಗಳನ್ನು ರಚಿಸಿದ್ದಾರೆ. ಅವರಿಗೆ ವಯಸ್ಸಾದರೂ, ಕವಿತೆಗಳಿಗೆ ಯಾವತ್ತೂ ವಯಸ್ಸಾಗುವುದಿಲ್ಲ’ ಎಂದರು.