<p><strong>ಬೆಂಗಳೂರು: </strong>ಮಾವಿನ ಅವಧಿ ಆರಂಭವಾಗಿರುವುದರಿಂದ ಲಾಲ್ಬಾಗ್ ಉದ್ಯಾನದಲ್ಲಿ ತರಹೇವಾರಿ ಮಾವಿನ ಮಾರಾಟ ಶುರುವಾಗಿದೆ. ಕೋಲಾರದ ರೈತರೊಬ್ಬರು ತಾವು ಬೆಳೆದ ಮಾವನ್ನು ತಂದು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾರೆ.</p>.<p>ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮವು (ಕೆಎಸ್ಎಂಡಿಎಂಸಿ) ಇದೇ ತಿಂಗಳಲ್ಲಿ ಮಾವು ಮೇಳ ನಡೆಸಲು ಸಿದ್ಧತೆ ನಡೆಸಿದೆ.</p>.<p>ಫಸಲು ಬಂದಿರುವುದರಿಂದ ಕೋಲಾರ ಜಿಲ್ಲೆಯ ಮಾವು ಬೆಳೆಗಾರ ಭಾಸ್ಕರ್ ರೆಡ್ಡಿ ಈಗಿನಿಂದಲೇ ವ್ಯಾಪಾರ ಆರಂಭಿಸಿದ್ದಾರೆ.ರಸಭರಿತ 12ಕ್ಕೂ ಹೆಚ್ಚು ತಳಿಯ ಮಾವು ಲಾಲ್ಬಾಗ್ ಉದ್ಯಾನಕ್ಕೆ ಬರುವವರನ್ನು ಆಕರ್ಷಿಸುತ್ತಿವೆ.</p>.<p>‘ಸಾಮಾನ್ಯವಾಗಿ ಈ ಅವಧಿ ವೇಳೆಗೆ ಮಾರುಕಟ್ಟೆಗಳಲ್ಲಿ ಮಾವು ತುಂಬಿ ತುಳುಕಾಡುತ್ತಿತ್ತು. ಆದರೆ, ಅಕಾಲಿಕ ಮಳೆಯಿಂದ ಮಾವು ಬೆಳೆ ತಡವಾಗಿ ಸಾಮಾನ್ಯ ಅವಧಿಗಿಂತ ವಿಳಂಬವಾಗಿ ಮಾವು<br />ಪ್ರಿಯರ ಕೈಸೇರುತ್ತಿದೆ. ಇಳುವರಿಯೂ ಶೇ 40ರಷ್ಟು ಕುಸಿದಿದೆ’ಎಂದುಭಾಸ್ಕರ್ ರೆಡ್ಡಿ ಅವರು ಹೇಳಿದರು.</p>.<p>‘ಮಾವು ನಿಗಮ ಮತ್ತು ತೋಟಗಾರಿಕೆ ಇಲಾಖೆ ಸಹಕಾರ<br />ದೊಂದಿಗೆ ಒಂದು ವಾರದಿಂದ ವ್ಯಾಪಾರ ಆರಂಭಿಸಿದ್ದೇನೆ. ಗ್ರಾಹಕರು ಮಾವು ಖರೀದಿಗೆ ಮುಗಿಬೀಳು<br />ತ್ತಿದ್ದಾರೆ. ಸದ್ಯಕ್ಕೆ ವ್ಯಾಪಾರ ಚೆನ್ನಾಗಿದ್ದು, ಈವರೆಗೆ 1.5 ಟನ್ ಮಾವು ಮಾರಾಟವಾಗಿದೆ’ ಎಂದು ಭಾಸ್ಕರ್ ಹೇಳಿದರು.</p>.<p class="Subhead">ಸಂಪರ್ಕ: 9972649184</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಮಾವಿನ ಅವಧಿ ಆರಂಭವಾಗಿರುವುದರಿಂದ ಲಾಲ್ಬಾಗ್ ಉದ್ಯಾನದಲ್ಲಿ ತರಹೇವಾರಿ ಮಾವಿನ ಮಾರಾಟ ಶುರುವಾಗಿದೆ. ಕೋಲಾರದ ರೈತರೊಬ್ಬರು ತಾವು ಬೆಳೆದ ಮಾವನ್ನು ತಂದು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾರೆ.</p>.<p>ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮವು (ಕೆಎಸ್ಎಂಡಿಎಂಸಿ) ಇದೇ ತಿಂಗಳಲ್ಲಿ ಮಾವು ಮೇಳ ನಡೆಸಲು ಸಿದ್ಧತೆ ನಡೆಸಿದೆ.</p>.<p>ಫಸಲು ಬಂದಿರುವುದರಿಂದ ಕೋಲಾರ ಜಿಲ್ಲೆಯ ಮಾವು ಬೆಳೆಗಾರ ಭಾಸ್ಕರ್ ರೆಡ್ಡಿ ಈಗಿನಿಂದಲೇ ವ್ಯಾಪಾರ ಆರಂಭಿಸಿದ್ದಾರೆ.ರಸಭರಿತ 12ಕ್ಕೂ ಹೆಚ್ಚು ತಳಿಯ ಮಾವು ಲಾಲ್ಬಾಗ್ ಉದ್ಯಾನಕ್ಕೆ ಬರುವವರನ್ನು ಆಕರ್ಷಿಸುತ್ತಿವೆ.</p>.<p>‘ಸಾಮಾನ್ಯವಾಗಿ ಈ ಅವಧಿ ವೇಳೆಗೆ ಮಾರುಕಟ್ಟೆಗಳಲ್ಲಿ ಮಾವು ತುಂಬಿ ತುಳುಕಾಡುತ್ತಿತ್ತು. ಆದರೆ, ಅಕಾಲಿಕ ಮಳೆಯಿಂದ ಮಾವು ಬೆಳೆ ತಡವಾಗಿ ಸಾಮಾನ್ಯ ಅವಧಿಗಿಂತ ವಿಳಂಬವಾಗಿ ಮಾವು<br />ಪ್ರಿಯರ ಕೈಸೇರುತ್ತಿದೆ. ಇಳುವರಿಯೂ ಶೇ 40ರಷ್ಟು ಕುಸಿದಿದೆ’ಎಂದುಭಾಸ್ಕರ್ ರೆಡ್ಡಿ ಅವರು ಹೇಳಿದರು.</p>.<p>‘ಮಾವು ನಿಗಮ ಮತ್ತು ತೋಟಗಾರಿಕೆ ಇಲಾಖೆ ಸಹಕಾರ<br />ದೊಂದಿಗೆ ಒಂದು ವಾರದಿಂದ ವ್ಯಾಪಾರ ಆರಂಭಿಸಿದ್ದೇನೆ. ಗ್ರಾಹಕರು ಮಾವು ಖರೀದಿಗೆ ಮುಗಿಬೀಳು<br />ತ್ತಿದ್ದಾರೆ. ಸದ್ಯಕ್ಕೆ ವ್ಯಾಪಾರ ಚೆನ್ನಾಗಿದ್ದು, ಈವರೆಗೆ 1.5 ಟನ್ ಮಾವು ಮಾರಾಟವಾಗಿದೆ’ ಎಂದು ಭಾಸ್ಕರ್ ಹೇಳಿದರು.</p>.<p class="Subhead">ಸಂಪರ್ಕ: 9972649184</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>