ಸರ್ವೆ ನಂ.1,2 ಮತ್ತು 81,82ರ ಮಧ್ಯಭಾಗದ ರಾಜಕಾಲುವೆ ಓಣಿ ವಿವಾದವು 2011-12ರಿಂದಲೂ ನ್ಯಾಯಾಲಯದಲ್ಲಿದ್ದು, ಒತ್ತುವರಿ ತೆರವಿಗೆ ಹೈಕೋರ್ಟ್ ಆದೇಶ ನೀಡಿತ್ತು. ಸ್ಥಳೀಯ ನಿವಾಸಿಗಳಿಗೆ ಒಂದು ತಿಂಗಳು ಕಾಲಾವಕಾಶ ನೀಡಿ, ಸ್ವಪ್ರೇರಿತರಾಗಿ ತೆರವುಗೊಳಿಸಲು ಸೂಚಿಸಲಾಗಿತ್ತು. ಇದಕ್ಕೆ ಸ್ಪಂದಿಸದ ಕಾರಣ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.