ಬೆಂಗಳೂರು: ‘ಆರೋಗ್ಯ ಮತ್ತು ಇತರೆ ಇಲಾಖೆಗಳಿಗೆ ಸಂಬಂಧಿಸಿದಂತೆ ಹಳಿ ತಪ್ಪಿದ ಆಡಳಿತವನ್ನು ಸರಿದಾರಿಗೆ ತರುವ ಪ್ರಯತ್ನವನ್ನು ಬಿಜೆಪಿಯವರು ಮಾಡಲಿ. ಇಲ್ಲದಿದ್ದರೆ ತಮ್ಮ ಬಾಯಿಗೆ ಬೀಗ ಹಾಕಿಕೊಂಡು ಕುಳಿತುಕೊಳ್ಳಲಿ’ ಎಂದು ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜೇಶ್ ದಾಸಪ್ಪನವರ್ ಟೀಕಿಸಿದ್ದಾರೆ.
‘ಪ್ರಪಂಚವೇ ಕೊರೊನಾ ಸೋಂಕಿನಿಂದ ಬಳಲುತ್ತಿರುವ ಈ ತುರ್ತು ಪರಿಸ್ಥಿತಿಯಲ್ಲಿ ಬಿಜೆಪಿಯವರು ಧರ್ಮಾಂಧತೆ ಮತ್ತು ನಿರಂಕುಶ ಸ್ವಭಾವದ ಮಾನಸಿಕ ಸೋಂಕಿನಿಂದ ಬಳಲುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಮೊದಲು ಬಿಜೆಪಿಯವರಿಗೆ ಆದ್ಯತೆಯ ಮೇರೆಗೆ ಮಾನಸಿಕ ಸೋಂಕಿನ ಲಸಿಕೆ ನೀಡಬೇಕು’ ಎಂದೂ ಹೇಳಿದ್ದಾರೆ.