ತಾರುಣ್ಯದ ಕನಸುಗಳಿಗೆ ಬಣ್ಣತುಂಬುವ ಭರದಲ್ಲಿ ಸಂಕಟಕ್ಕೆ ಸಿಲುಕಿ ಕುದಿವ ಕುಲುಮೆಯಲ್ಲಿ ನಿಂತಂತ್ತಿದ್ದ ಜೋಡಿಯ ಪ್ರಾಂಜಲ ಮಾತುಗಳನ್ನು ಆಲಿಸಿದ ನ್ಯಾಯಪೀಠ, ಅರ್ಜಿ ವಜಾಗೊಳಿಸಿ ಆದೇಶಿಸಿತು. ಅಷ್ಟೇ ಅಲ್ಲ, ಇಬ್ಬರಿಗೂ ಕಿವಿಮಾತು ಹೇಳುವ ಮೂಲಕ, ‘ಜನ್ಮ ನೀಡಿ ಬೆಳೆಸಿದ ತಂದೆ-ತಾಯಿಯ ಋಣ ತೀರಿಸಲು ಅಸಾಧ್ಯ.ಹೆತ್ತವರಿಗಿಂತ ದೊಡ್ಡ ದೇವರಿಲ್ಲ ಎಂಬುದನ್ನು ಸದಾ ನೆನಪಿಟ್ಟು ಬದುಕಿ’ ಎಂದು ಶುಭ ಹಾರೈಸಿತು.