‘2020ರ ಜೂನ್ 16ರಂದು ನಡೆದ ಸಿಂಡಿಕೇಟ್ ಸಭೆಯಲ್ಲಿ ಕೈಗೊಳ್ಳಲಾದ ನಿರ್ಣಯದಂತೆ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಕುಲಪತಿಯವರು ಸರ್ಕಾರಕ್ಕೆ ಹೇಳಿದ್ದಾರೆ. ಆದರೆ, ಇದು ತಿರುಚಿದ ಮಾಹಿತಿ. ಅಂದು ನಡೆದ ಸಭೆಯಲ್ಲಿ ಇದಕ್ಕೆ ಅನುಮೋದನೆ ನೀಡಿರಲಿಲ್ಲ. ಸಮಗ್ರ ಯೋಜನಾ ವರದಿ, ಕಟ್ಟಡದ ನಕ್ಷೆ, ವೆಚ್ಚದ ಮಾಹಿತಿ ಯಾವುದೂ ಇಲ್ಲದೆ ಅನುಮೋದನೆ ನೀಡಲು ಸಾಧ್ಯವಿಲ್ಲ. ಸಮಗ್ರ ವರದಿ ನೋಡಿದ ನಂತರ ಈ ಬಗ್ಗೆ ತೀರ್ಮಾನ ಕೈಗೊಳ್ಳಬಹುದು ಎಂದು ಹೇಳಲಾಗಿತ್ತು. ಆದರೆ, ಆಗದೇ ಇರುವ ನಿರ್ಧಾರವನ್ನು, ಆಗಿದೆ ಎಂದು ಮಾಡಿ ಸರ್ಕಾರಕ್ಕೆ ಪತ್ರ ಬರೆಯುವ ಮೂಲಕ ವಿಶ್ವವಿದ್ಯಾಲಯಕ್ಕೂ ಮತ್ತು ಸರ್ಕಾರಕ್ಕೂ ಕುಲಪತಿಯವರು ಮುಜುಗರ ತಂದಿದ್ದಾರೆ’ ಎಂದು ಕರಣ್ಕುಮಾರ್ ದೂರಿದರು.