<p><strong>ಬೆಂಗಳೂರು</strong>: ನಗರದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದರಿಂದಾಗಿ ನಗರದ ಹೋಟೆಲ್ಗಳು ಗ್ರಾಹಕರ ತೀವ್ರ ಕೊರತೆ ಎದುರಿಸುತ್ತಿವೆ. ನಿರೀಕ್ಷಿತ ವ್ಯಾಪಾರವಿಲ್ಲದೇ ನಷ್ಟ ಅನುಭವಿಸುತ್ತಿರುವ ಹಲವು ಹೋಟೆಲ್ಗಳನ್ನು ಮಾರಾಟ ಮಾಡಲು ಮಾಲೀಕರು ಮುಂದಾಗಿದ್ದಾರೆ.</p>.<p>ಲಾಕ್ಡೌನ್ ಸಡಿಲಗೊಂಡ ಬಳಿಕ ಜೂನ್ ತಿಂಗಳಲ್ಲಿ ಹೋಟೆಲ್ಗಳು ಕಾರ್ಯಾರಂಭ ಮಾಡಿದವು. ಆದರೆ, ವ್ಯಾಪಾರ ಚೇತರಿಸಿಕೊಂಡಿಲ್ಲ. ಹೋಟೆಲ್ಗಳಲ್ಲಿ ಮೊದಲಿನಂತೆ ಸಭೆ ಸಮಾರಂಭಗಳನ್ನು ಆಯೋಜಿಸಲು ಅವಕಾಶವಿಲ್ಲ. ಜನರು ಕುಟುಂಬ ಸಮೇತರಾಗಿ ರೆಸ್ಟೋರೆಂಟ್ಗಳಿಗೆ ಭೇಟಿ ನೀಡುವ ಪರಿಪಾಠವಂತೂ ನಿಂತೇ ಹೋಗಿದೆ.</p>.<p>ಬಾಡಿಗೆ ಪಾವತಿ ಹಾಗೂ ಸಿಬ್ಬಂದಿಗೆ ಸಂಬಳ ನೀಡುವುದಕ್ಕೂ ಮಾಲೀಕರು ಕಷ್ಟ ಪಡುತ್ತಿದ್ದಾರೆ. ಮತ್ತಷ್ಟು ನಷ್ಟ ಅನುಭವಿಸುವುದನ್ನು ತಪ್ಪಿಸಲು ಹೋಟೆಲ್ಗಳನ್ನೇ ಮಾರಾಟಕ್ಕಿಟ್ಟಿದ್ದಾರೆ.</p>.<p>‘ಆರು ವರ್ಷಗಳಿಂದ ಈ ಭಾಗದಲ್ಲಿ ಒಳ್ಳೆಯ ಹೆಸರು ಗಳಿಸಿದ್ದ ಹೋಟೆಲ್ ನಮ್ಮದು. ಸದಾ ಗ್ರಾಹಕರಿಂದ ತುಂಬಿರುತ್ತಿತ್ತು. ಆದರೆ, ಈಗ ಗ್ರಾಹಕರಿಗಾಗಿ ನಾವೇ ಹುಡುಕಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ವ್ಯಾಪಾರ ಸರಿಯಾಗಿ ನಡೆಯದ ಕಾರಣ ಹೋಟೆಲ್ ಮಾರಲು ನಿರ್ಧರಿಸಿದ್ದೇನೆ’ ಎಂದು ಬನ್ನೇರುಘಟ್ಟ ರಸ್ತೆಯ ಅರಕೆರೆ ಬಳಿ ಇರುವ ‘ಇಂಗು-ತೆಂಗು’ ಹೋಟೆಲ್ ಮಾಲೀಕ ಪರಮೇಶ್ವರ್ ಅಡಿಗ ತಿಳಿಸಿದರು.</p>.<p>‘ಹೋಟೆಲ್ ಆರಂಭಿಸುವಾಗ ₹50 ಲಕ್ಷ ಖರ್ಚಾಯಿತು. ಆದರೆ, ಖರೀದಿದಾರರು ಈ ಮೊತ್ತಕ್ಕೆ ಕೊಂಡುಕೊಳ್ಳುವುದೂ ಅನುಮಾನ. ವ್ಯಾಪಾರ ಮೊದಲಿನಂತಾಗುವ ನಂಬಿಕೆ ಕಡಿಮೆ. ಈಗಿನ ಪರಿಸ್ಥಿತಿ ಗಮನಿಸಿದರೆ ಮುಂದಿನ ದಿನಗಳು ಇನ್ನೂ ಕಷ್ಟದಿಂದ ಕೂಡಿರಲಿವೆ’ ಎಂದು ಬೇಸರ ವ್ಯಕ್ತಪಡಿಸಿದರು.</p>.<p>‘₹25 ಲಕ್ಷ ಬಂಡವಾಳ ಹಾಕಿ ಹೋಟೆಲ್ ಆರಂಭಿಸಿದೆ. ಕೊರೊನಾ ಬರುವವರೆಗೂ ವ್ಯಾಪಾರ ಚೆನ್ನಾಗಿತ್ತು. ಹೋಟೆಲ್ ಒಳಭಾಗದ ವಿನ್ಯಾಸ ಹಾಗೂ ಪೀಠೋಪಕರಣಗಳಿಗೆ ಸಾಕಷ್ಟು ಖರ್ಚು ಮಾಡಿದೆ. ಕೊನೆಯ ಪಕ್ಷ ಆ ದುಡ್ಡಾದರೂ ಕೈಸೇರಲಿ ಎಂಬ ನಿರೀಕ್ಷೆಯಲ್ಲಿ ಹೋಟೆಲ್ ಮಾರಾಟಕ್ಕಿಟ್ಟಿದ್ದೇನೆ’ ಎಂದು ಕನಕಪುರ ರಸ್ತೆಯಲ್ಲಿರುವ ಹೋಟೆಲ್ ಮತ್ತು ರೆಸ್ಟೋರೆಂಟ್ವೊಂದರ ಮಾಲೀಕ ಅರ್ಜುನ್ ಹೇಳಿದರು.</p>.<p><strong>‘ಸರ್ಕಾರ ಬಡ್ಡಿರಹಿತ ಸಾಲ ನೀಡಲಿ’</strong><br />‘ಹೋಟೆಲ್ ಕಾರ್ಮಿಕರನ್ನು ಸರ್ಕಾರ ನಿರಂತರವಾಗಿ ಕಡೆಗಣಿಸುತ್ತಾ ಬಂದಿದೆ. ಹೋಟೆಲ್ ಉದ್ಯಮಕ್ಕೆ ಈಗ ಸರ್ಕಾರದ ಬೆಂಬಲ ಅಗತ್ಯ. ಮಾಲೀಕರು ಹೋಟೆಲ್ಗಳನ್ನು ಮಾರಾಟ ಮಾಡುವಷ್ಟು ಗಾಢ ಸಂಕಷ್ಟಕ್ಕೆ ಸಿಲುಕಿದ್ದಾರೆ. ಉದ್ಯಮದ ಚೇತರಿಕೆಗೆ ಮಧ್ಯಮ ಪ್ರಮಾಣದ ಹೋಟೆಲ್ಗಳಿಗೆ ₹5 ಲಕ್ಷ ಹಾಗೂ ದೊಡ್ಡ ಹೋಟೆಲ್ಗಳಿಗೆ ₹10 ಲಕ್ಷ ಬಡ್ಡಿರಹಿತ ಸಾಲವನ್ನು ಸರ್ಕಾರ ಒದಗಿಸಬೇಕು’ ಎಂದು ಕರ್ನಾಟಕ ಪ್ರದೇಶ ಹೋಟೆಲ್ ಮತ್ತು ರೆಸ್ಟೋರೆಂಟ್ಗಳ ಸಂಘದ ಅಧ್ಯಕ್ಷ ಚಂದ್ರಶೇಖರ್ ಹೆಬ್ಬಾರ್ ಒತ್ತಾಯಿಸಿದರು.</p>.<p>**</p>.<p>ವ್ಯಾಪಾರವಿಲ್ಲದೆ ಶೇ 30ರಷ್ಟು ಹೋಟೆಲ್ಗಳನ್ನು ಮಾರಲು ಮಾಲೀಕರು ಚಿಂತನೆ ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ಇದರ ಪ್ರಮಾಣವೂ ಹೆಚ್ಚಾಗಲಿದೆ.<br /><em><strong>-ಪಿ.ಸಿ.ರಾವ್, ಬೃಹತ್ ಬೆಂಗಳೂರು ಹೋಟೆಲ್ಗಳ ಸಂಘದ ಅಧ್ಯಕ್ಷ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ನಗರದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದರಿಂದಾಗಿ ನಗರದ ಹೋಟೆಲ್ಗಳು ಗ್ರಾಹಕರ ತೀವ್ರ ಕೊರತೆ ಎದುರಿಸುತ್ತಿವೆ. ನಿರೀಕ್ಷಿತ ವ್ಯಾಪಾರವಿಲ್ಲದೇ ನಷ್ಟ ಅನುಭವಿಸುತ್ತಿರುವ ಹಲವು ಹೋಟೆಲ್ಗಳನ್ನು ಮಾರಾಟ ಮಾಡಲು ಮಾಲೀಕರು ಮುಂದಾಗಿದ್ದಾರೆ.</p>.<p>ಲಾಕ್ಡೌನ್ ಸಡಿಲಗೊಂಡ ಬಳಿಕ ಜೂನ್ ತಿಂಗಳಲ್ಲಿ ಹೋಟೆಲ್ಗಳು ಕಾರ್ಯಾರಂಭ ಮಾಡಿದವು. ಆದರೆ, ವ್ಯಾಪಾರ ಚೇತರಿಸಿಕೊಂಡಿಲ್ಲ. ಹೋಟೆಲ್ಗಳಲ್ಲಿ ಮೊದಲಿನಂತೆ ಸಭೆ ಸಮಾರಂಭಗಳನ್ನು ಆಯೋಜಿಸಲು ಅವಕಾಶವಿಲ್ಲ. ಜನರು ಕುಟುಂಬ ಸಮೇತರಾಗಿ ರೆಸ್ಟೋರೆಂಟ್ಗಳಿಗೆ ಭೇಟಿ ನೀಡುವ ಪರಿಪಾಠವಂತೂ ನಿಂತೇ ಹೋಗಿದೆ.</p>.<p>ಬಾಡಿಗೆ ಪಾವತಿ ಹಾಗೂ ಸಿಬ್ಬಂದಿಗೆ ಸಂಬಳ ನೀಡುವುದಕ್ಕೂ ಮಾಲೀಕರು ಕಷ್ಟ ಪಡುತ್ತಿದ್ದಾರೆ. ಮತ್ತಷ್ಟು ನಷ್ಟ ಅನುಭವಿಸುವುದನ್ನು ತಪ್ಪಿಸಲು ಹೋಟೆಲ್ಗಳನ್ನೇ ಮಾರಾಟಕ್ಕಿಟ್ಟಿದ್ದಾರೆ.</p>.<p>‘ಆರು ವರ್ಷಗಳಿಂದ ಈ ಭಾಗದಲ್ಲಿ ಒಳ್ಳೆಯ ಹೆಸರು ಗಳಿಸಿದ್ದ ಹೋಟೆಲ್ ನಮ್ಮದು. ಸದಾ ಗ್ರಾಹಕರಿಂದ ತುಂಬಿರುತ್ತಿತ್ತು. ಆದರೆ, ಈಗ ಗ್ರಾಹಕರಿಗಾಗಿ ನಾವೇ ಹುಡುಕಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ವ್ಯಾಪಾರ ಸರಿಯಾಗಿ ನಡೆಯದ ಕಾರಣ ಹೋಟೆಲ್ ಮಾರಲು ನಿರ್ಧರಿಸಿದ್ದೇನೆ’ ಎಂದು ಬನ್ನೇರುಘಟ್ಟ ರಸ್ತೆಯ ಅರಕೆರೆ ಬಳಿ ಇರುವ ‘ಇಂಗು-ತೆಂಗು’ ಹೋಟೆಲ್ ಮಾಲೀಕ ಪರಮೇಶ್ವರ್ ಅಡಿಗ ತಿಳಿಸಿದರು.</p>.<p>‘ಹೋಟೆಲ್ ಆರಂಭಿಸುವಾಗ ₹50 ಲಕ್ಷ ಖರ್ಚಾಯಿತು. ಆದರೆ, ಖರೀದಿದಾರರು ಈ ಮೊತ್ತಕ್ಕೆ ಕೊಂಡುಕೊಳ್ಳುವುದೂ ಅನುಮಾನ. ವ್ಯಾಪಾರ ಮೊದಲಿನಂತಾಗುವ ನಂಬಿಕೆ ಕಡಿಮೆ. ಈಗಿನ ಪರಿಸ್ಥಿತಿ ಗಮನಿಸಿದರೆ ಮುಂದಿನ ದಿನಗಳು ಇನ್ನೂ ಕಷ್ಟದಿಂದ ಕೂಡಿರಲಿವೆ’ ಎಂದು ಬೇಸರ ವ್ಯಕ್ತಪಡಿಸಿದರು.</p>.<p>‘₹25 ಲಕ್ಷ ಬಂಡವಾಳ ಹಾಕಿ ಹೋಟೆಲ್ ಆರಂಭಿಸಿದೆ. ಕೊರೊನಾ ಬರುವವರೆಗೂ ವ್ಯಾಪಾರ ಚೆನ್ನಾಗಿತ್ತು. ಹೋಟೆಲ್ ಒಳಭಾಗದ ವಿನ್ಯಾಸ ಹಾಗೂ ಪೀಠೋಪಕರಣಗಳಿಗೆ ಸಾಕಷ್ಟು ಖರ್ಚು ಮಾಡಿದೆ. ಕೊನೆಯ ಪಕ್ಷ ಆ ದುಡ್ಡಾದರೂ ಕೈಸೇರಲಿ ಎಂಬ ನಿರೀಕ್ಷೆಯಲ್ಲಿ ಹೋಟೆಲ್ ಮಾರಾಟಕ್ಕಿಟ್ಟಿದ್ದೇನೆ’ ಎಂದು ಕನಕಪುರ ರಸ್ತೆಯಲ್ಲಿರುವ ಹೋಟೆಲ್ ಮತ್ತು ರೆಸ್ಟೋರೆಂಟ್ವೊಂದರ ಮಾಲೀಕ ಅರ್ಜುನ್ ಹೇಳಿದರು.</p>.<p><strong>‘ಸರ್ಕಾರ ಬಡ್ಡಿರಹಿತ ಸಾಲ ನೀಡಲಿ’</strong><br />‘ಹೋಟೆಲ್ ಕಾರ್ಮಿಕರನ್ನು ಸರ್ಕಾರ ನಿರಂತರವಾಗಿ ಕಡೆಗಣಿಸುತ್ತಾ ಬಂದಿದೆ. ಹೋಟೆಲ್ ಉದ್ಯಮಕ್ಕೆ ಈಗ ಸರ್ಕಾರದ ಬೆಂಬಲ ಅಗತ್ಯ. ಮಾಲೀಕರು ಹೋಟೆಲ್ಗಳನ್ನು ಮಾರಾಟ ಮಾಡುವಷ್ಟು ಗಾಢ ಸಂಕಷ್ಟಕ್ಕೆ ಸಿಲುಕಿದ್ದಾರೆ. ಉದ್ಯಮದ ಚೇತರಿಕೆಗೆ ಮಧ್ಯಮ ಪ್ರಮಾಣದ ಹೋಟೆಲ್ಗಳಿಗೆ ₹5 ಲಕ್ಷ ಹಾಗೂ ದೊಡ್ಡ ಹೋಟೆಲ್ಗಳಿಗೆ ₹10 ಲಕ್ಷ ಬಡ್ಡಿರಹಿತ ಸಾಲವನ್ನು ಸರ್ಕಾರ ಒದಗಿಸಬೇಕು’ ಎಂದು ಕರ್ನಾಟಕ ಪ್ರದೇಶ ಹೋಟೆಲ್ ಮತ್ತು ರೆಸ್ಟೋರೆಂಟ್ಗಳ ಸಂಘದ ಅಧ್ಯಕ್ಷ ಚಂದ್ರಶೇಖರ್ ಹೆಬ್ಬಾರ್ ಒತ್ತಾಯಿಸಿದರು.</p>.<p>**</p>.<p>ವ್ಯಾಪಾರವಿಲ್ಲದೆ ಶೇ 30ರಷ್ಟು ಹೋಟೆಲ್ಗಳನ್ನು ಮಾರಲು ಮಾಲೀಕರು ಚಿಂತನೆ ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ಇದರ ಪ್ರಮಾಣವೂ ಹೆಚ್ಚಾಗಲಿದೆ.<br /><em><strong>-ಪಿ.ಸಿ.ರಾವ್, ಬೃಹತ್ ಬೆಂಗಳೂರು ಹೋಟೆಲ್ಗಳ ಸಂಘದ ಅಧ್ಯಕ್ಷ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>