ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಲೋಕಸಭಾ ಚುನಾವಣೆ: ಮತದಾನಕ್ಕೆ ಪ್ರೇರೇಪಿಸಲು ನಾಲ್ವರು ರಾಯಭಾರಿಗಳು

Published : 2 ಏಪ್ರಿಲ್ 2024, 15:49 IST
Last Updated : 2 ಏಪ್ರಿಲ್ 2024, 15:49 IST
ಫಾಲೋ ಮಾಡಿ
Comments
‘ನಮ್ಮ ಬೆಂಗಳೂರು ಐಕಾನ್ಸ್’
* ರಮೇಶ್ ಅರವಿಂದ್ ಚಿತ್ರ ನಟ ಮತ್ತು ನಿರ್ದೇಶಕ * ನೀತು ವನಜಾಕ್ಷಿ ನಟಿ ಹಾಗೂ ರೂಪದರ್ಶಿ. * ಅನುಪ್ ಶ್ರೀಧರ್ ಬ್ಯಾಡ್ಮಿಂಟನ್ ಆಟಗಾರ. * ಅರ್ಚನಾ ಜಿ ಕಾಮತ್ ಟೇಬಲ್ ಟೆನ್ನಿಸ್ ಆಟಗಾರ್ತಿ.
ಒಂದು ಮತಕ್ಕೆ ಬದಲಾವಣೆಯ ಶಕ್ತಿ: ರಮೇಶ್ ಚಿತ್ರನಟ
ರಮೇಶ್ ಅರವಿಂದ್ ಮಾತನಾಡಿ ‘ಏಪ್ರಿಲ್ 26ರಂದು ಚುನಾವಣಾ ಹಬ್ಬ. ಎಲ್ಲರೂ ಸಡಗರದಿಂದ ಮತಗಟ್ಟೆಗೆ ತೆರಳಿ ಮತದಾನ ಮಾಡೋಣ. ಒಂದು ಮತಕ್ಕೆ ಎಲ್ಲವನ್ನೂ ಬದಲಿಸುವ ಶಕ್ತಿಯಿದೆ. ಆದ್ದರಿಂದ ಎಲ್ಲರೂ ತಪ್ಪದೆ ಮತದಾನ ಮಾಡಬೇಕು’ ಎಂದು ತಿಳಿಸಿದರು. ‘ಚುನಾವಣಾ ವ್ಯವಸ್ಥೆಯಲ್ಲಿ ನಾವು ಮತದಾನ ಮಾಡಿದರೆ ಏನೂ ಬದಲಾಗುವುದಿಲ್ಲ ಎಂಬ ಮನೋಭಾವಿದ್ದರೆ ಅದನ್ನು ಮೊದಲು ತಲೆಯಿಂದ ತೆಗೆಯಿರಿ. ಜವಾಬ್ದಾರಿಯಿಂದ ಎಲ್ಲರೂ ಒಂದಾಗಿ ಮತದಾನ ಮಾಡಿ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಉತ್ತಮ ಸಮಾಜವನ್ನು ರೂಪಿಸಿ’ ಎಂದು ಪ್ರೇರೇಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT