ಹುಮನಾಬಾದ್ (ಬೀದರ್ ಜಿಲ್ಲೆ) : ವಾಹನ ಸವಾರರಿಂದ ಹಣ ವಸೂಲಿ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ತಾಲ್ಲೂಕಿನ ಮೋಳಕೆರಾ ಗ್ರಾಮ ಸಮೀಪ ಕಲಬುರಗಿ ಲೋಕಾಯುಕ್ತ ಅಧೀಕ್ಷಕ ಪಿ. ಕರ್ನೂಲ್ ನೇತೃತ್ವದ ತಂಡ ಬೆಳಗಿನ ಜಾವ ದಾಳಿ ನಡೆಸಿದೆ.
ದಾಳಿ ವೇಳೆಯಲ್ಲಿ ಒಂದೂವರೆ ಲಕ್ಷ ರೂಪಾಯಿ ಪತ್ತೆಯಾಗಿದೆ. ವಾಹನಗಳಿಂದ ಸಂಗ್ರಹಿಸುವ ಹಣ ಹಾಗೂ ಕಚೇರಿಯಲ್ಲಿ ದೊರಕಿರುವ ಹಣ ತಾಳೆ ಮಾಡಿ ನೋಡಿದಾಗ ಹೆಚ್ಚುವರಿ ಹಣ ಸಂಗ್ರಹ ಮಾಡಿರುವುದು ಪತ್ತೆಯಾಗಿದೆ ಎನ್ನಲಾಗಿದೆ.
ಕಲಬುರಗಿ ಡಿವೈಎಸ್ಪಿ ಸಿದ್ದಲಿಂಗಪ್ಪ ಗೌಡಪಾಟೀಲ, ಬೀದರ್ ಡಿವೈಎಸ್ಪಿ ಎನ್.ಎಂ ಓಲೇಕರ್ ಹಾಗೂ 30 ಸಿಬ್ಬಂದಿ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.