ಲೋಕಾಯುಕ್ತದಲ್ಲಿ ವಿಚಾರಣೆ ಬಾಕಿ ಇರುವ ಅಧಿಕಾರಿಯನ್ನು ಅದೇ ತನಿಖಾ ಸಂಸ್ಥೆಯ ಮುಖ್ಯ ಎಂಜಿನಿಯರ್ ಹುದ್ದೆಗೆ ನೇಮಿಸಿರುವುದನ್ನು ಪ್ರಶ್ನಿಸಿ ಬಂಡೆಮಠ ಕೆಎಚ್ಬಿ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಿ. ರಾಮಕೃಷ್ಣೇಗೌಡ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದರು. ಆ ಬಳಿಕ ಸಂಸ್ಥೆಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ನಂಜುಂಡಪ್ಪ ವಿರುದ್ಧ ಮೂರು ದೂರುಗಳ ವಿಚಾರಣೆ ಬಾಕಿ ಇರುವ ಮಾಹಿತಿ ಲಭಿಸಿದೆ.