‘ಯಶವಂತಪುರ ಎಪಿಎಂಸಿಗೆ ಪ್ರತಿನಿತ್ಯ 300ಕ್ಕೂ ಹೆಚ್ಚು ಲಾರಿಗಳು ಈರುಳ್ಳಿ, ಆಲೂಗಡ್ಡೆ, ಬೆಳ್ಳುಳ್ಳಿ ಸೇರಿ ಇತರೆ ಕೃಷಿ ಉತ್ಪನ್ನ, ತರಕಾರಿ ಹೊತ್ತು ಬರುತ್ತವೆ. ಆದರೆ, ಗುರುವಾರ 181 ಲಾರಿಗಳು ಮಾತ್ರ ಬಂದಿವೆ. ದಾಸನಪುರ ಮಾರುಕಟ್ಟೆಗೂ ಹೆಚ್ಚು ಲಾರಿಗಳು ಬಂದಿಲ್ಲ. ಆದರೆ ವಹಿವಾಟಿನಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ’ ಎಂದು ಯಶವಂತಪುರ ಎಪಿಎಂಸಿ ಕಾರ್ಯದರ್ಶಿ ಕೆ.ಸಿ. ದೊರೆಸ್ವಾಮಿ ಮಾಹಿತಿ ನೀಡಿದರು.