‘ಖಾಸಗಿ ಸಂಸ್ಥೆಯವರು ಕೆರೆಯ ಜಾಗ ಒತ್ತುವರಿ ಮಾಡಿದ್ದು, ಒತ್ತುವರಿ ಜಾಗಕ್ಕೆ ನೀರು ಹರಿಯುತ್ತದೆ ಎಂಬ ಉದ್ದೇಶದಿಂದ ಕೆರೆ ಕೋಡಿ ಒಡೆದು ಹಾಕಿದ್ದರು. ಹಾಗಾಗಿ ಹದಿನೈದು ವರ್ಷಗಳಿಂದ ಕೆರೆಯಲ್ಲಿ ನೀರು ಸಂಗ್ರಹವಾಗದೇ ಹರಿದು ಹೋಗುತ್ತಿತ್ತು. ಈ ಸಾರಿ ಗ್ರಾಮಸ್ಥರೆಲ್ಲ ಸೇರಿ ಕೋಡಿ ಕಟ್ಟಿ, ರಕ್ಷಿಸಿದ್ದೇವೆ. ಹಾಗಾಗಿ ಕೆರೆಯಲ್ಲಿ ನೀರು ಸಂಗ್ರಹವಾಯಿತು’ ಎನ್ನುತ್ತಾರೆ ಗ್ರಾಮದ ನಿವಾಸಿ ರಾಮಕೃಷ್ಣ.