ಬೆಂಗಳೂರು: 2020ನೇ ಸಾಲಿನ ಕರ್ನಾಟಕ "ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ"ಯನ್ನು ತುಮಕೂರಿನ ಸಿದ್ದಗಂಗಾ ಮಠಕ್ಕೆ ಹಾಗೂ ಮುಧೋಳದ ಗಾಂಧಿ-ವಿನೋಬಾ ಭಾವೆ ಅವರ ಅನುಯಾಯಿ ಮೀರಾ ತಾಯಿಕೊಪ್ಪೀಕರ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರುಪ್ರದಾನ ಮಾಡಿದರು.
ಬೆಂಗಳೂರಿನಗಾಂಧಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಿದ್ದಗಂಗಾ ಮಠದ ಪರವಾಗಿ ಲಿಂಗೈಕ್ಯ ಶ್ರೀಗಳ ವೈದ್ಯರಾಗಿ 40 ವರ್ಷ ಸೇವೆ ಸಲ್ಲಿಸಿದ್ದ ಡಾ. ಶಿವಪ್ಪ ಹಾಗೂ ಮೀರಾ ತಾಯಿ ಪರವಾಗಿ ಸಚಿವ ಗೋವಿಂದ ಕಾರಜೋಳ ಪ್ರಶಸ್ತಿ ಸ್ವೀಕರಿಸಿದರು.