<p><strong>ಬೆಂಗಳೂರು</strong>: ದಸರಾ ಅಂಗವಾಗಿಮಲ್ಲೇಶ್ವರದ ಆರ್ಯವೈಶ್ಯ ಸಂಘವು ಮಲ್ಲೇಶ್ವರದ ಕನ್ಯಕಾಪರಮೇಶ್ವರಿ ದೇವಸ್ಥಾನದಲ್ಲಿ ಅ.7ರಿಂದ 16ರವರೆಗೆಮಲ್ಲೇಶ್ವರ ದಸರಾ ಉತ್ಸವವನ್ನು ಆಯೋಜಿಸಿದೆ.</p>.<p>ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದದೇವಸ್ಥಾನದ ಕಾರ್ಯದರ್ಶಿ ರವಿಶಂಕರ್,‘ದಸರಾ ಉತ್ಸವಕ್ಕೆ ಅ.7ರಂದು ಸಂಜೆ6 ಗಂಟೆಗೆ ಉನ್ನತ ಶಿಕ್ಷಣ ಸಚಿವ ಸಿ.ಎನ್.ಅಶ್ವತ್ಥನಾರಾಯಣ, ಸಂಸದರಾದ ಪಿ.ಸಿ.ಮೋಹನ್ ಹಾಗೂ ಡಿ.ವಿ.ಸದಾನಂದ ಗೌಡ ಅವರು ಚಾಲನೆ ನೀಡಲಿದ್ದಾರೆ’ ಎಂದು ಮಾಹಿತಿ ನೀಡಿದರು.</p>.<p>‘ಪ್ರತಿ ವರ್ಷವೂ ದೇವಾಲಯದಲ್ಲಿ ವಿಶೇಷ ರೀತಿಯ ಸೆಟ್ ಹಾಕಿ ದಸರಾ ಆಚರಿಸಲಾಗುವುದು. ಈ ಬಾರಿ‘ಸಾಗರ ಕನ್ಯೆ ಶ್ರೀವಾಸವಿ’ ಎಂಬ ಪರಿಕಲ್ಪನೆಯಡಿ 50 ಕುಶಲಕರ್ಮಿಗಳಿಂದ ಸಾಗರ ಗರ್ಭದ ವಿಸ್ಮಯಗಳ ಸೆಟ್ ಹಾಕಲಾಗಿದೆ’ ಎಂದರು.</p>.<p>‘ನವರಾತ್ರಿ ವಿಶೇಷವಾಗಿ 800ಕ್ಕೂ ಹೆಚ್ಚು ಗೊಂಬೆಗಳನ್ನು ಕೂರಿಸಲಾಗಿದೆ. 10 ಅಡಿ ಎತ್ತರದ ಅಂಬಾರಿ ಮಾಡಲಾಗಿದೆ.ಉತ್ಸವದ ಅವಧಿಯಲ್ಲಿ ಪ್ರತಿದಿನ ಬೆಳಿಗ್ಗೆ 6ರಿಂದ ಸಂಜೆ 9 ಗಂಟೆಯವರೆಗೂ ಭಕ್ತರಿಗೆ ಪ್ರವೇಶ ಇರಲಿದೆ. ಏಕಕಾಲಕ್ಕೆ20 ಜನರಿಗೆ ಮಾತ್ರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ದಸರಾ ಅಂಗವಾಗಿಮಲ್ಲೇಶ್ವರದ ಆರ್ಯವೈಶ್ಯ ಸಂಘವು ಮಲ್ಲೇಶ್ವರದ ಕನ್ಯಕಾಪರಮೇಶ್ವರಿ ದೇವಸ್ಥಾನದಲ್ಲಿ ಅ.7ರಿಂದ 16ರವರೆಗೆಮಲ್ಲೇಶ್ವರ ದಸರಾ ಉತ್ಸವವನ್ನು ಆಯೋಜಿಸಿದೆ.</p>.<p>ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದದೇವಸ್ಥಾನದ ಕಾರ್ಯದರ್ಶಿ ರವಿಶಂಕರ್,‘ದಸರಾ ಉತ್ಸವಕ್ಕೆ ಅ.7ರಂದು ಸಂಜೆ6 ಗಂಟೆಗೆ ಉನ್ನತ ಶಿಕ್ಷಣ ಸಚಿವ ಸಿ.ಎನ್.ಅಶ್ವತ್ಥನಾರಾಯಣ, ಸಂಸದರಾದ ಪಿ.ಸಿ.ಮೋಹನ್ ಹಾಗೂ ಡಿ.ವಿ.ಸದಾನಂದ ಗೌಡ ಅವರು ಚಾಲನೆ ನೀಡಲಿದ್ದಾರೆ’ ಎಂದು ಮಾಹಿತಿ ನೀಡಿದರು.</p>.<p>‘ಪ್ರತಿ ವರ್ಷವೂ ದೇವಾಲಯದಲ್ಲಿ ವಿಶೇಷ ರೀತಿಯ ಸೆಟ್ ಹಾಕಿ ದಸರಾ ಆಚರಿಸಲಾಗುವುದು. ಈ ಬಾರಿ‘ಸಾಗರ ಕನ್ಯೆ ಶ್ರೀವಾಸವಿ’ ಎಂಬ ಪರಿಕಲ್ಪನೆಯಡಿ 50 ಕುಶಲಕರ್ಮಿಗಳಿಂದ ಸಾಗರ ಗರ್ಭದ ವಿಸ್ಮಯಗಳ ಸೆಟ್ ಹಾಕಲಾಗಿದೆ’ ಎಂದರು.</p>.<p>‘ನವರಾತ್ರಿ ವಿಶೇಷವಾಗಿ 800ಕ್ಕೂ ಹೆಚ್ಚು ಗೊಂಬೆಗಳನ್ನು ಕೂರಿಸಲಾಗಿದೆ. 10 ಅಡಿ ಎತ್ತರದ ಅಂಬಾರಿ ಮಾಡಲಾಗಿದೆ.ಉತ್ಸವದ ಅವಧಿಯಲ್ಲಿ ಪ್ರತಿದಿನ ಬೆಳಿಗ್ಗೆ 6ರಿಂದ ಸಂಜೆ 9 ಗಂಟೆಯವರೆಗೂ ಭಕ್ತರಿಗೆ ಪ್ರವೇಶ ಇರಲಿದೆ. ಏಕಕಾಲಕ್ಕೆ20 ಜನರಿಗೆ ಮಾತ್ರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>