<p><strong>ಬೆಂಗಳೂರು</strong>: ‘ಏಳೆಂಟು ವರ್ಷಗಳಲ್ಲಿ ಸ್ವಚ್ಛತೆಗಾಗಿ ಮಲದ ಗುಂಡಿಗೆ ಇಳಿದವರಲ್ಲಿ ನೂರಕ್ಕೂ ಅಧಿಕ ಕಾರ್ಮಿಕರು ಮೃತಪಟ್ಟಿದ್ದಾರೆ. ಸರ್ಕಾರ ಈ ಕಡೆಗೆ ಗಮನ ಹರಿಸಬೇಕು. ಮಲದ ಗುಂಡಿಗೆ ಇಳಿಯುವುದು ಕಟ್ಟುನಿಟ್ಟಾಗಿ ಕೊನೆಗೊಳ್ಳಬೇಕು’ ಎಂದು ಸಾಮಾಜಿಕ ಕಾರ್ಯಕರ್ತೆ, ರಂಗಭೂಮಿ ಕಲಾವಿದೆ ದು. ಸರಸ್ವತಿ ಹೇಳಿದರು.</p>.<p>ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶನಿವಾರ ಆಯೋಜಿಸಿದ್ದ ‘ಮನೆಯಂಗಳದಲ್ಲಿ ಮಾತುಕತೆ’ಯ ಅತಿಥಿಯಾಗಿ ಮಾತನಾಡಿದರು.</p>.<p>‘ಮಲದ ಗುಂಡಿಗೆ ಇಳಿಯುವುದು ನಿಷೇಧ ಎಂದು ಕಡತದಲ್ಲಷ್ಟೇ ಇದೆ. ಆದರೆ ಈ ಕೆಲಸ ನಿಂತಿಲ್ಲ. ಮೃತಪಟ್ಟವರ ಅವಲಂಬಿತರ ಜೀವನಕ್ಕೆ ₹10 ಲಕ್ಷ, ₹12 ಲಕ್ಷ ನೀಡಲಾಗುತ್ತಿದೆ. ಸಫಾಯಿ ಕರ್ಮಾಚಾರಿಗಳ ಪರ ಹೋರಾಟಗಳನ್ನು ಹಮ್ಮಿಕೊಂಡೇ ಬಂದಿದ್ದೇವೆ’ ಎಂದು ವಿವರಿಸಿದರು.</p>.<p>‘ಮಹಿಳಾ ಪೌರಕಾರ್ಮಿಕರು ಅನುಭವಿಸುವ ಯಾತನೆ ಅಷ್ಟಿಷ್ಟಲ್ಲ. ಊರಿನ ಕಸವನ್ನು ಗುಡಿಸುವವರ ಬದುಕು ಶೋಚನೀಯವಾಗಿದೆ. ಅವರನ್ನು ಸರ್ಕಾರ ಗುತ್ತಿಗೆ ಆಧಾರದಲ್ಲಿ ದುಡಿಸಿಕೊಳ್ಳುವುದು ನಾಗರಿಕ ಸಮಾಜ ಒಪ್ಪುವಂಥದ್ದಲ್ಲ. ಎಲ್ಲರನ್ನು ಕಾಯಂ ನೌಕರರನ್ನಾಗಿ ನೇಮಕ ಮಾಡಿಕೊಂಡು ಗೌರವಯುತ ಜೀವನ ನಡೆಸಲು ಅವಕಾಶ ನೀಡಬೇಕು. ಇತ್ತೀಚೆಗೆ ಈ ವಿಚಾರದಲ್ಲಿ ಒಂದಷ್ಟು ಕೆಲಸಗಳಾಗಿರುವುದು ಖುಷಿಯ ವಿಚಾರ’ ಎಂದು ಹೇಳಿದರು.</p>.<p>ಹೋರಾಟ, ಸಾಹಿತ್ಯ, ರಂಗಭೂಮಿಯ ಅನುಭವಗಳನ್ನು ಹಂಚಿಕೊಂಡರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಲವಂತರಾವ್ ಪಾಟೀಲ, ಜಂಟಿ ನಿರ್ದೇಶಕಿ ಬನಶಂಕರಿ ಅಂಗಡಿ, ಸಾಹಿತಿ ಸುನಂದಮ್ಮ ಭಾಗವಹಿಸಿದ್ದರು.</p>.<div><blockquote>ದಲಿತ ಮಹಿಳೆಯರು ಸಫಾಯಿ ಕರ್ಮಚಾರಿಗಳು ಮಹಿಳಾ ಪೌರಕಾರ್ಮಿಕರು ಗಾರ್ಮೆಂಟ್ಸ್ ಹೆಣ್ಣುಮಕ್ಕಳು ಸಾಧನಾ ಆರಾಧನಾ ಸಂಘದ ಮೂಲಕ ಲೈಂಗಿಕ ಕಾರ್ಯಕರ್ತೆಯರ ಪರ ಕೆಲಸ ಮಾಡಿದ್ದೇನೆ. ಅವರ ನೋವು– ನಲಿವುಗಳನ್ನು ನೋಡಿ ಕಲಿತದ್ದು ಸಾಕಷ್ಟಿದೆ. ಈ ಎಲ್ಲ ಬೋಧಿಸತ್ವಗಳ ಒಡನಾಟದಿಂದ ಮನುಷ್ಯಳಾಗಿ ರೂಪುಗೊಂಡಿದ್ದೇನೆ </blockquote><span class="attribution">ದು. ಸರಸ್ವತಿ ಸಾಮಾಜಿಕ ಕಾರ್ಯಕರ್ತೆ ರಂಗಭೂಮಿ ಕಲಾವಿದೆ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ಏಳೆಂಟು ವರ್ಷಗಳಲ್ಲಿ ಸ್ವಚ್ಛತೆಗಾಗಿ ಮಲದ ಗುಂಡಿಗೆ ಇಳಿದವರಲ್ಲಿ ನೂರಕ್ಕೂ ಅಧಿಕ ಕಾರ್ಮಿಕರು ಮೃತಪಟ್ಟಿದ್ದಾರೆ. ಸರ್ಕಾರ ಈ ಕಡೆಗೆ ಗಮನ ಹರಿಸಬೇಕು. ಮಲದ ಗುಂಡಿಗೆ ಇಳಿಯುವುದು ಕಟ್ಟುನಿಟ್ಟಾಗಿ ಕೊನೆಗೊಳ್ಳಬೇಕು’ ಎಂದು ಸಾಮಾಜಿಕ ಕಾರ್ಯಕರ್ತೆ, ರಂಗಭೂಮಿ ಕಲಾವಿದೆ ದು. ಸರಸ್ವತಿ ಹೇಳಿದರು.</p>.<p>ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶನಿವಾರ ಆಯೋಜಿಸಿದ್ದ ‘ಮನೆಯಂಗಳದಲ್ಲಿ ಮಾತುಕತೆ’ಯ ಅತಿಥಿಯಾಗಿ ಮಾತನಾಡಿದರು.</p>.<p>‘ಮಲದ ಗುಂಡಿಗೆ ಇಳಿಯುವುದು ನಿಷೇಧ ಎಂದು ಕಡತದಲ್ಲಷ್ಟೇ ಇದೆ. ಆದರೆ ಈ ಕೆಲಸ ನಿಂತಿಲ್ಲ. ಮೃತಪಟ್ಟವರ ಅವಲಂಬಿತರ ಜೀವನಕ್ಕೆ ₹10 ಲಕ್ಷ, ₹12 ಲಕ್ಷ ನೀಡಲಾಗುತ್ತಿದೆ. ಸಫಾಯಿ ಕರ್ಮಾಚಾರಿಗಳ ಪರ ಹೋರಾಟಗಳನ್ನು ಹಮ್ಮಿಕೊಂಡೇ ಬಂದಿದ್ದೇವೆ’ ಎಂದು ವಿವರಿಸಿದರು.</p>.<p>‘ಮಹಿಳಾ ಪೌರಕಾರ್ಮಿಕರು ಅನುಭವಿಸುವ ಯಾತನೆ ಅಷ್ಟಿಷ್ಟಲ್ಲ. ಊರಿನ ಕಸವನ್ನು ಗುಡಿಸುವವರ ಬದುಕು ಶೋಚನೀಯವಾಗಿದೆ. ಅವರನ್ನು ಸರ್ಕಾರ ಗುತ್ತಿಗೆ ಆಧಾರದಲ್ಲಿ ದುಡಿಸಿಕೊಳ್ಳುವುದು ನಾಗರಿಕ ಸಮಾಜ ಒಪ್ಪುವಂಥದ್ದಲ್ಲ. ಎಲ್ಲರನ್ನು ಕಾಯಂ ನೌಕರರನ್ನಾಗಿ ನೇಮಕ ಮಾಡಿಕೊಂಡು ಗೌರವಯುತ ಜೀವನ ನಡೆಸಲು ಅವಕಾಶ ನೀಡಬೇಕು. ಇತ್ತೀಚೆಗೆ ಈ ವಿಚಾರದಲ್ಲಿ ಒಂದಷ್ಟು ಕೆಲಸಗಳಾಗಿರುವುದು ಖುಷಿಯ ವಿಚಾರ’ ಎಂದು ಹೇಳಿದರು.</p>.<p>ಹೋರಾಟ, ಸಾಹಿತ್ಯ, ರಂಗಭೂಮಿಯ ಅನುಭವಗಳನ್ನು ಹಂಚಿಕೊಂಡರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಲವಂತರಾವ್ ಪಾಟೀಲ, ಜಂಟಿ ನಿರ್ದೇಶಕಿ ಬನಶಂಕರಿ ಅಂಗಡಿ, ಸಾಹಿತಿ ಸುನಂದಮ್ಮ ಭಾಗವಹಿಸಿದ್ದರು.</p>.<div><blockquote>ದಲಿತ ಮಹಿಳೆಯರು ಸಫಾಯಿ ಕರ್ಮಚಾರಿಗಳು ಮಹಿಳಾ ಪೌರಕಾರ್ಮಿಕರು ಗಾರ್ಮೆಂಟ್ಸ್ ಹೆಣ್ಣುಮಕ್ಕಳು ಸಾಧನಾ ಆರಾಧನಾ ಸಂಘದ ಮೂಲಕ ಲೈಂಗಿಕ ಕಾರ್ಯಕರ್ತೆಯರ ಪರ ಕೆಲಸ ಮಾಡಿದ್ದೇನೆ. ಅವರ ನೋವು– ನಲಿವುಗಳನ್ನು ನೋಡಿ ಕಲಿತದ್ದು ಸಾಕಷ್ಟಿದೆ. ಈ ಎಲ್ಲ ಬೋಧಿಸತ್ವಗಳ ಒಡನಾಟದಿಂದ ಮನುಷ್ಯಳಾಗಿ ರೂಪುಗೊಂಡಿದ್ದೇನೆ </blockquote><span class="attribution">ದು. ಸರಸ್ವತಿ ಸಾಮಾಜಿಕ ಕಾರ್ಯಕರ್ತೆ ರಂಗಭೂಮಿ ಕಲಾವಿದೆ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>