<p><strong>ಬೆಂಗಳೂರು:</strong>ಗೌತಮ್ಕುಮಾರ್ ಮೇಯರ್ ಆಗುವುದು ಖಚಿತವಾಗುತ್ತಿದ್ದಂತೆ, ಪಾಲಿಕೆಯ ಕೌನ್ಸಿಲ್ ಸಭಾಂಗಣದ ಆವರಣಕ್ಕೆ ಬೆಂಬಲಿಗರೊಂದಿಗೆ ಬಂದ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್, ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸಿದರು.</p>.<p>‘ಬೆಂಗಳೂರು ನಗರಕ್ಕೆ ಮಾರ್ವಾಡಿ ಒಬ್ಬರನ್ನು ಮೇಯರ್ ಆಗಿ ಬಿಜೆಪಿ ಆಯ್ಕೆ ಮಾಡಿದೆ.ಬೆಂಗಳೂರು ಕೆಂಪೇಗೌಡರು ಸ್ಥಾಪಿಸಿರುವ ಮಹಾನಗರ. ಕನ್ನಡಿಗರ ರಾಜಧಾನಿ. ಇಲ್ಲಿ ಅಚ್ಚ ಕನ್ನಡಿಗರು ಅಧಿಕಾರ ಚಲಾಯಿಸಬೇಕು. ಆದರೆ, ಇದೀಗ ಈ ನಗರ ಮಾರ್ಮಾಡಿಗರು, ಪರ ಭಾಷಿಕರ ಕೈಗೆ ಹೋಗುತ್ತಿದೆ’ ಎಂದು ವಾಟಾಳ್ ಅಸಮಾಧಾನ ವ್ಯಕ್ತಪಡಿಸಿದರು.</p>.<p>‘ನಾನು ಎಂದಿಗೂ ಬಿಬಿಎಂಪಿ ಬಳಿ ಬಂದವನಲ್ಲ. ಆದರೆ, ಇಂದು ಮಾರ್ವಾಡಿಯೊಬ್ಬರು ಮೇಯರ್ ಆಗುತ್ತಿರುವುದಕ್ಕೆ ಇಲ್ಲಿ ಬಂದು ಪ್ರತಿಭಟಿಸಬೇಕಾಗಿದೆ. ಕನ್ನಡಿಗರು ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ಪರಿಸ್ಥಿತಿ ಕೈಮೀರಿ ಹೋಗುತ್ತದೆ. ಕನ್ನಡ ಒಕ್ಕೂಟ ಗೌತಮ್ಕುಮಾರ್ ಆಯ್ಕೆಯನ್ನು ತೀವ್ರವಾಗಿ ವಿರೋಧಿಸುತ್ತದೆ’ ಎಂದು ಹೇಳಿದರು.</p>.<p>ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಅವರು ಘೋಷಣೆ ಕೂಗಿದರು. ಬೆಂಬಲಿಗರು ಇದಕ್ಕೆ ಧ್ವನಿಗೂಡಿಸಿದರು.</p>.<p>ಮಧ್ಯಪ್ರವೇಶಿಸಿದ ಪೊಲೀಸರು, ವಾಟಾಳ್ ನಾಗರಾಜ್ ಮತ್ತು ಬೆಂಬಲಿಗರನ್ನು ಕರೆದೊಯ್ದರು.</p>.<p><strong>‘ಬೆಂಗಳೂರಿಗನಲ್ಲ ಎನ್ನುವುದು ಸರಿಯಲ್ಲ’</strong></p>.<p>‘ಚುನಾಯಿತ ಪ್ರತಿನಿಧಿಯಾಗಿರುವ ಗೌತಮ್ಕುಮಾರ್ಗೆ ಮೇಯರ್ ಆಗುವ ಹಕ್ಕು ಸಂವಿಧಾನಬದ್ಧವಾಗಿ ಸಿಕ್ಕಿದೆ. ಪಾಲಿಕೆಯ ಬಿಜೆಪಿ ಸದಸ್ಯರು, ಶಾಸಕ–ಸಂಸದರು ಅವರನ್ನು ಬೆಂಬಲಿಸಿದ್ದಾರೆ. ಈಗ, ಅವರು ಬೇರೆ ಜಾತಿ ಎನ್ನುವುದು, ಬೆಂಗಳೂರಿಗರಲ್ಲ ಎನ್ನುವುದು ಸರಿಯಲ್ಲ’ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಹೇಳಿದರು.</p>.<p>‘51 ಎಂದರೆ ಶೇ 100, 49 ಎಂದರೆ ಶೇ 0 ಎನ್ನುವುದು ಪ್ರಜಾಪ್ರಭುತ್ವದ ಮೂಲತತ್ವ. ಮೇಯರ್ಗೆ ಬಹುಮತವಿದೆ. ಗೌತಮ್ ಪಾಲಿಕೆ ಸದಸ್ಯರಾಗಿ ಎರಡು ಬಾರಿ ಆಯ್ಕೆಯಾಗಿದ್ದಾರೆ. ಅವರು ಮಾರ್ವಾಡಿ, ಇವರು ಒಕ್ಕಲಿಗರು, ಲಿಂಗಾಯತರು ಎಂದು ಟ್ಯಾಗ್ ಮಾಡುವುದು ನಿಲ್ಲಬೇಕು’ ಎಂದು ಅವರು ಅಭಿಪ್ರಾಯಪಟ್ಟರು.</p>.<p><strong>ಬಿಜೆಪಿ ವಿಜಯೋತ್ಸವ</strong></p>.<p>ಗೌತಮ್ಕುಮಾರ್ ಜೈನ್ ಮೇಯರ್ ಎಂದು ಘೋಷಿಸುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಪಕ್ಷದ ಧ್ವಜವನ್ನು ಹಿಡಿದು ಸಂಭ್ರಮಿಸಿದರು.</p>.<p>‘ವಂದೇ ಮಾತರಂ’, ‘ಭಾರತ್ ಮಾತಾ ಕಿ ಜೈ’ ಎಂದು ಘೋಷಿಸಿದರು. ಪ್ರಧಾನಿ ನರೇಂದ್ರ ಮೋದಿ, ಪಕ್ಷದ ಅಧ್ಯಕ್ಷ ಅಮಿತ್ ಶಾ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಗೌತಮ್ ಕುಮಾರ್ ಪರ ಘೋಷಣೆ ಕೂಗಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong>ಗೌತಮ್ಕುಮಾರ್ ಮೇಯರ್ ಆಗುವುದು ಖಚಿತವಾಗುತ್ತಿದ್ದಂತೆ, ಪಾಲಿಕೆಯ ಕೌನ್ಸಿಲ್ ಸಭಾಂಗಣದ ಆವರಣಕ್ಕೆ ಬೆಂಬಲಿಗರೊಂದಿಗೆ ಬಂದ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್, ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸಿದರು.</p>.<p>‘ಬೆಂಗಳೂರು ನಗರಕ್ಕೆ ಮಾರ್ವಾಡಿ ಒಬ್ಬರನ್ನು ಮೇಯರ್ ಆಗಿ ಬಿಜೆಪಿ ಆಯ್ಕೆ ಮಾಡಿದೆ.ಬೆಂಗಳೂರು ಕೆಂಪೇಗೌಡರು ಸ್ಥಾಪಿಸಿರುವ ಮಹಾನಗರ. ಕನ್ನಡಿಗರ ರಾಜಧಾನಿ. ಇಲ್ಲಿ ಅಚ್ಚ ಕನ್ನಡಿಗರು ಅಧಿಕಾರ ಚಲಾಯಿಸಬೇಕು. ಆದರೆ, ಇದೀಗ ಈ ನಗರ ಮಾರ್ಮಾಡಿಗರು, ಪರ ಭಾಷಿಕರ ಕೈಗೆ ಹೋಗುತ್ತಿದೆ’ ಎಂದು ವಾಟಾಳ್ ಅಸಮಾಧಾನ ವ್ಯಕ್ತಪಡಿಸಿದರು.</p>.<p>‘ನಾನು ಎಂದಿಗೂ ಬಿಬಿಎಂಪಿ ಬಳಿ ಬಂದವನಲ್ಲ. ಆದರೆ, ಇಂದು ಮಾರ್ವಾಡಿಯೊಬ್ಬರು ಮೇಯರ್ ಆಗುತ್ತಿರುವುದಕ್ಕೆ ಇಲ್ಲಿ ಬಂದು ಪ್ರತಿಭಟಿಸಬೇಕಾಗಿದೆ. ಕನ್ನಡಿಗರು ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ಪರಿಸ್ಥಿತಿ ಕೈಮೀರಿ ಹೋಗುತ್ತದೆ. ಕನ್ನಡ ಒಕ್ಕೂಟ ಗೌತಮ್ಕುಮಾರ್ ಆಯ್ಕೆಯನ್ನು ತೀವ್ರವಾಗಿ ವಿರೋಧಿಸುತ್ತದೆ’ ಎಂದು ಹೇಳಿದರು.</p>.<p>ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಅವರು ಘೋಷಣೆ ಕೂಗಿದರು. ಬೆಂಬಲಿಗರು ಇದಕ್ಕೆ ಧ್ವನಿಗೂಡಿಸಿದರು.</p>.<p>ಮಧ್ಯಪ್ರವೇಶಿಸಿದ ಪೊಲೀಸರು, ವಾಟಾಳ್ ನಾಗರಾಜ್ ಮತ್ತು ಬೆಂಬಲಿಗರನ್ನು ಕರೆದೊಯ್ದರು.</p>.<p><strong>‘ಬೆಂಗಳೂರಿಗನಲ್ಲ ಎನ್ನುವುದು ಸರಿಯಲ್ಲ’</strong></p>.<p>‘ಚುನಾಯಿತ ಪ್ರತಿನಿಧಿಯಾಗಿರುವ ಗೌತಮ್ಕುಮಾರ್ಗೆ ಮೇಯರ್ ಆಗುವ ಹಕ್ಕು ಸಂವಿಧಾನಬದ್ಧವಾಗಿ ಸಿಕ್ಕಿದೆ. ಪಾಲಿಕೆಯ ಬಿಜೆಪಿ ಸದಸ್ಯರು, ಶಾಸಕ–ಸಂಸದರು ಅವರನ್ನು ಬೆಂಬಲಿಸಿದ್ದಾರೆ. ಈಗ, ಅವರು ಬೇರೆ ಜಾತಿ ಎನ್ನುವುದು, ಬೆಂಗಳೂರಿಗರಲ್ಲ ಎನ್ನುವುದು ಸರಿಯಲ್ಲ’ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಹೇಳಿದರು.</p>.<p>‘51 ಎಂದರೆ ಶೇ 100, 49 ಎಂದರೆ ಶೇ 0 ಎನ್ನುವುದು ಪ್ರಜಾಪ್ರಭುತ್ವದ ಮೂಲತತ್ವ. ಮೇಯರ್ಗೆ ಬಹುಮತವಿದೆ. ಗೌತಮ್ ಪಾಲಿಕೆ ಸದಸ್ಯರಾಗಿ ಎರಡು ಬಾರಿ ಆಯ್ಕೆಯಾಗಿದ್ದಾರೆ. ಅವರು ಮಾರ್ವಾಡಿ, ಇವರು ಒಕ್ಕಲಿಗರು, ಲಿಂಗಾಯತರು ಎಂದು ಟ್ಯಾಗ್ ಮಾಡುವುದು ನಿಲ್ಲಬೇಕು’ ಎಂದು ಅವರು ಅಭಿಪ್ರಾಯಪಟ್ಟರು.</p>.<p><strong>ಬಿಜೆಪಿ ವಿಜಯೋತ್ಸವ</strong></p>.<p>ಗೌತಮ್ಕುಮಾರ್ ಜೈನ್ ಮೇಯರ್ ಎಂದು ಘೋಷಿಸುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಪಕ್ಷದ ಧ್ವಜವನ್ನು ಹಿಡಿದು ಸಂಭ್ರಮಿಸಿದರು.</p>.<p>‘ವಂದೇ ಮಾತರಂ’, ‘ಭಾರತ್ ಮಾತಾ ಕಿ ಜೈ’ ಎಂದು ಘೋಷಿಸಿದರು. ಪ್ರಧಾನಿ ನರೇಂದ್ರ ಮೋದಿ, ಪಕ್ಷದ ಅಧ್ಯಕ್ಷ ಅಮಿತ್ ಶಾ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಗೌತಮ್ ಕುಮಾರ್ ಪರ ಘೋಷಣೆ ಕೂಗಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>